
ಬೀದರ್: ಕಮಲನಗರ ಪಟ್ಟಣದಿಂದ ಸಂಚರಿಸುವ ಎಲ್ಲ ಎಕ್ಸ್ಪ್ರೆಸ್ ರೈಲುಗಳು ನಿಲುಗಡೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸೇವಾ ಸಮಿತಿ ಆಗ್ರಹಿಸಿದೆ.

j3tvkannada
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ ಮುಧಾಳೆ ನೇತೃತ್ವದಲ್ಲಿ ದಕ್ಷಿಣ ಮಧ್ಯ ರೈಲ್ವೆ ಸಿಕಿಂದರಾಬಾದ್ನ ವಿಭಾಗೀಯ ಅಧಿಕಾರಿ ಭರತೇಶಕುಮಾರ ಜೈನ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಮಲನಗರ, ಔರಾದ್ ಮತ್ತು ಮಹಾರಾಷ್ಟ್ರ ಸೇರಿದಂತೆ 96ಕ್ಕೂ ಹೆಚ್ಚು ಗ್ರಾಮದ ರೈಲು ಪ್ರಯಾಣಿಕರು ಈ ರೈಲ್ವೆ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ರೈತರು, ಅಂಗವಿಕಲರು, ವ್ಯಾಪಾರಸ್ಥರಿಗೆ ಬಸ್ಗಿಂತಲೂ ರೈಲ್ವೆ ಪ್ರಯಾಣವೇ ಅನುಕೂಲಕರ ಎನಿಸಿದೆ. ಆದರೆ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲುಗಳು ನಿಲುಗಡೆ ಆಗದೆ ಇರುವುದರಿಂದ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಪ್ರಯಾಣಿಕರ ಹಿತದೃಷ್ಟಿಯಿಂದ ಎಲ್ಲ ಎಕ್ಸ್ಪ್ರೆಸ್ ರೈಲುಗಳು ನಿಲುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಜರ ಬಾಗವಾನ, ಶಬ್ಬಿರ ಖುರೇಶಿ, ಗಣೇಶ ಹಡಪದ, ಕಲ್ಲೇಶ ಉದಗೀರೆ, ಗೋವಿಂದರಾವ ತಾಂದಳೆ ಹಾಗೂ ಇನ್ನಿತರರು ಇದ್ದರು.