
ಚಿಕ್ಕಮಗಳೂರು: ತುಂಗಾ ನದಿಗೆ ಈಜಲು ಹೋಗಿದ್ದಾಗ ಮುಳುಗಿ ಮೃತಪಟ್ಟಿದ್ದ ತಾಲ್ಲೂಕಿನ ಬೊಮ್ಮಲಾಪುರ ಬಳಿಯ ಮೆಣಸೂರು ಗ್ರಾಮದ ಮನೋಜ್ (17) ಮೃತದೇಹ ಪತ್ತೆಯಾಗಿದೆ.

j3tvkannada
ಹರಿಹರಪುರ ನುಗ್ಗಿಮಕ್ಕಿ ಬಳಿ ಮನೋಜ್ ತನ್ನ ಊರಿನ ಐದು ಮಂದಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಅಗ್ನಿಶಾಮಕ ದಳ, ಪೊಲೀಸರು ತಡರಾತ್ರಿ ವರೆಗೂ ಮೃತದೇಹ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಸೋಮವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮಧ್ಯಾಹ್ನ ಹೊತ್ತಿಗೆ ನೀರಿನಿಂದ ಮೃತದೇಹ ಹೊರ ತೆಗೆದರು. ಹರಿಹರಪುರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.