
ಕೋಲಾರ: ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ ಕೊರಿಯರ್ ಪಾರ್ಸೆಲ್ ಕೊಡುವ ವಿಚಾರವಾಗಿ ಆರಂಭಗೊಂಡ ಗಲಾಟೆಯು ಅತಿರೇಕಕ್ಕೆ ತಿರುಗಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿಯಲಾಗಿದೆ. ಗ್ರಾಮಸ್ಥರು ಆರೋಪಿಗಳನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಮುದುವಾಡಿ ಹೊಸಹಳ್ಳಿ ಗ್ರಾಮದ ಚೇತನ್ ಹಾಗೂ ಯುವರಾಜ್ ಗಾಯಾಳುಗಳು.

j3tvkannada
ಮುದುವಾಡಿ ಹೊಸಹಳ್ಳಿಯ ಚೇತನ್ ಎಂಬುವರು ಆನ್ಲೈನ್ನಲ್ಲಿ ಡ್ರೈಫ್ರಟ್ಸ್ ಆರ್ಡರ್ ಮಾಡಿದ್ದರು. ಈ ವಿಚಾರವಾಗಿ ಮೊಬೈಲ್ಗೆ ಸಂದೇಶ ಬಂದಿದ್ದು, ಡ್ರೈಫೂಟ್ಸ್ ಭಾನುವಾರದಂದು ತಲುಪಬೇಕಿತ್ತು. ಸಂದೇಶ ಬಂದಿದ್ದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಪವನ್ ಎಂಬುವರಿಗೆ ಕರೆ ಮಾಡಿದ್ದು, ಆ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಅತಿರೇಕಕ್ಕೆ ತಿರುಗಿದ ಪರಿಣಾಮ ಪವನ್ ಹಾಗೂ ಆತನ ಸೋದರ ಮೋಹನ್ ಮುದುವಾಡಿ ಹೊಸಹಳ್ಳಿ ಗ್ರಾಮದ ಬಳಿಗೆ ತೆರಳಿದ್ದಾರೆ. ಚೇತನ್ ತನ್ನ ಗೆಳೆಯ ಯುವರಾಜ್ʼನೊಂದಿಗೆ ಬಂದ ಸಂದರ್ಭದಲ್ಲಿ, ಪವನ್ ಹಾಗೂ ಮೋಹನ್ ಏಕಾಏಕಿ ಚೇತನ್ ಹಾಗೂ ಯುವರಾಜ್ ಗೆ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ತಕ್ಷಣವೇ ಗ್ರಾಮಸ್ಥರು ಕೊರಿಯರ್ ಬಾಯ್ ಪವನ್ ಹಾಗೂ ಮೋಹನ್ʼನನ್ನು ಹಿಡಿದು ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಈ ಸಂಬಂಧ ಹೊಸಹಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.