
ಕಲಬುರಗಿ: ತಾಲ್ಲೂಕಿನ ಖಜೂರಿ ಗ್ರಾಮದ ಕೋರಣೇಶ್ವರ ವಿರಕ್ತಮಠದ ಬಾವಿಗೆ ವಿಷಕಾರಿ ಕ್ರಿಮಿನಾಶಕ ಔಷಧ ಎಸೆದ ಆರೋಪದಡಿ ಮಠದಿಂದ ವಿಮುಕ್ತಗೊಂಡಿರುವ ಸ್ವಾಮೀಜಿ ಹಾಗೂ ಒಬ್ಬ ಮಹಿಳೆ ವಿರುದ್ಧ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

j3tvkannada
ಮಠದಿಂದ ವಿಮುಕ್ತಗೊಂಡಿರುವ ಮುರುಕೇಂದ್ರ ಸ್ವಾಮೀಜಿ (ಚಂದ್ರಶೇಖರಯ್ಯ ಅಸೂಟಿ) ಅನಿತಾ ಗಣಪತಿ ವಿರುದ್ಧ ಮಠದ ಟ್ರಸ್ಟ್ ಸಮಿತಿ ಸದಸ್ಯ ಹನುಮಂತ ಸಾವಳೇಶ್ವರ ನೇತೃತ್ವದಲ್ಲಿ ದೂರು ನೀಡಲಾಗಿದೆ. ವಿಮುಕ್ತಗೊಂಡ ನಂತರವೂ ಸ್ವಾಮೀಜಿ ಮಠದ ಹಿಂಬದಿಯ ತಗಡಿನ ಶೆಡ್ನಲ್ಲಿ ಉಳಿದುಕೊಂಡಿದ್ದರು. ಮಠದ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಮಧ್ಯಾಹ್ನದ ಊಟ, ಕುಡಿಯುವ ನೀರಿಗಾಗಿ ಅದೇ ಬಾವಿಯ ನೀರು ಬಳಕೆ ಮಾಡಲಾಗುತ್ತಿತ್ತು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟುಮಾಡಿ ಮಠಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿಲಾಗಿದೆ.