

ವಿಜಯಪುರ : ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟುವ ಮಾಹಿತಿ ಇಲ್ಲ. ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಬೆಂಬಲ ನೀಡುತ್ತೇವೆ. ಉತ್ತರ ಕರ್ನಾಟಕದಾದ್ಯಂತ ಸಹಕಾರ ನೀಡುವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು ಯತ್ನಾಳ್ ನಮ್ಮ ಸಮಾಜದವರು, ನಮ್ಮ ನಾಯಕರು, ನಮ್ಮ ಹೋರಾಟಗರು. ಇದರಲ್ಲಿ ಬೇರೆ ಸಮಾಜದವರು ನಮ್ಮ ಸಮಾಜದ ಬಗ್ಗೆ ಮೂಗು ತೋರಿಸುವ ಅವಶ್ಯಕತೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಾಂಗ್ರೆಸ್ನಿಂದ ಪಂಚಮಸಾಲಿ ನಾಯಕರ ನಿರ್ಲಕ್ಷ್ಯವಾಗಿದೆ. ನಮ್ಮ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅನ್ಯಾಯವಾದಾಗ ನಾನು ಬಂದು ನಿಂತಿದ್ದೇನೆ. ಪಕ್ಷಾತೀತವಾಗಿ ನಮ್ಮ ಸಮಾಜದ ನಾಯಕ ಬೆನ್ನಿಗೆ ನಿಂತಿದ್ದೇನೆ. ಇದರಲ್ಲಿ ಬೇರೆಯವರು ಮೂಗು ತೋರಿಸಬಾರದು. ಯತ್ನಾಳ್ ಉಚ್ಚಾಟನೆ ನಮಗೆ ಅಸಮಧಾನ ಮೂಡಿಸಿದೆ, ನಾವು ಯತ್ನಾಳ ಬೆನ್ನಿಗೆ ನಿಲ್ಲುತ್ತೇವೆ. ನಮ್ಮ ಸಮಾಜದ ಒಗ್ಗಟ್ಟು ಸಹಿಸದೆ ಹೀಗೆ ಮಾಡುತ್ತಿದ್ದಾರೆ, ದನ ಕಾಯೋ ಹುಡುಗನು ನನ್ನ ಹೋರಾಟಕ್ಕೆ ಸ್ಪಂದಿಸಿದ್ದರೆ ನಾನು ಅವರ ಬೆನ್ನಿಗೆ ನಿಲ್ಲುವೆ. ನಮ್ಮ ಸಮಾಜದ ಪ್ರತಿಯೊಬ್ಬರ ಪರ ಧ್ವನಿ ಎತ್ತುವೆ ಎಂದು ಹೇಳಿದರು.