
ದಕ್ಷಿಣ ಕನ್ನಡ: ಭವಿಷ್ಯದ ನೀರು-ಇಂದಿನ ಕಾಳಜಿ ಎಂಬ ನೀರು ಉಳಿಸುವ ಮಹಾ ಅಭಿಯಾನ ಬೆಳ್ತಂಗಡಿ ತಾಲ್ಲೂಕಿನಾದ್ಯಂತ ನಡೆಯಲಿದ್ದು, ಕಾರ್ಯಕ್ರಮದ ಕರಪತ್ರವನ್ನು ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾ ಕಚೇರಿಯಲ್ಲಿ ಯೋಜನಾಧಿಕಾರಿ ಸುರೇಂದ್ರ ಅವರು ಬಿಡುಗಡೆ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಧರ್ಮಸ್ಥಳ, ಯುನಿಸೆಫ್ ಹೈದರಾಬಾದ್ ಆಶ್ರಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನಲ್ಲಿ ನಡೆದ ಅಭಿಯಾನದಲ್ಲಿ, ಶುದ್ಧ ನೀರಿನ ಅಗತ್ಯ, ನೀರಿನ ನಿರ್ವಹಣೆಯ ಅವಶ್ಯಕತೆ, ಪ್ರಸ್ತುತ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ನೀರಿನ ಪರಿಸ್ಥಿತಿ, ನೀರಿನ ಸಂರಕ್ಷಣೆಯಲ್ಲಿ ನಮ್ಮ ಹೊಣೆಗಾರಿಕೆ ಹಾಗೂ ನೀರಿನ ಉಳಿತಾಯದ ಕುರಿತು ಅವರು ಮಾಹಿತಿ ನೀಡಿದರು.