

ಕಲಬುರಗಿ : ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಯಿಂದ ವಾಪಸ್ಸಾಗಿದ್ದಾರೆ. ಅವರು ನೇರವಾಗಿ ತಮ್ಮ ಕ್ಷೇತ್ರ ವಿಜಯಪುರಕ್ಕೆ ಹೋಗದೆ, ಜಿಲ್ಲೆಯ ಚಿಂಚೋಳಿಯಲ್ಲಿರುವ ಅವರ ಸಿದ್ಧಸಿರಿ ಶುಗರ್ ಫ್ಯಾಕ್ಟರಿಯ ಗೆಸ್ಟ್ಹೌಸ್ ನಲ್ಲಿ (sugar factory guest house) ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರಾಗಿರುವ ರಾಮನಗೌಡ ಪಾಟೀಲ್ ಗೆಸ್ಟ್ ಹೌಸ್ಗೆ ಆಗಮಿಸಿ ತಮ್ಮ ತಂದೆಯನ್ನು ಮಾತಾಡಿಸಿಕೊಂಡು ಹೋದರು. ಮಾಧ್ಯಮದವರ ಯಾವ ಪ್ರಶ್ನೆಗೂ ಉತ್ತರ ಕೊಡದೆ ರಾಮನಗೌಡ ಕಾರು ಹತ್ತಿ ಹೋಗಿದರೆ.