
ರಾಮನಗರ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಬೈಕ್ನಿಂದ ಕೆಳಗೆ ಬಿದ್ದ ಅಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಕ್ಯಾಂಟರ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

j3tvkannada.in
ಬ್ಯಾಡರಹಳ್ಳಿ ಗ್ರಾಮದ ಸಿದ್ದರಾಜು ಮತ್ತು ಜಗದಾಂಬ ದಂಪತಿಯ ಮಗಳು ದಾಕ್ಷಾಯಿಣಿ ಅಲಿಯಾಸ್ ಧನುಶ್ರೀ (20) ಮೃತಪಟ್ಟ ಯುವತಿ. ಊರ ಹಬ್ಬಕ್ಕಾಗಿ ಬ್ಯಾಡರಹಳ್ಳಿಗೆ ಬಂದಿದ್ದ ಆಕೆ ಹಬ್ಬ ಮುಗಿಸಿಕೊಂಡು ಮಂಗಳವಾರ ಬೆಳಗ್ಗೆ ಮಂಗಳೂರಿಗೆ ಮರಳಲು ಸಹೋದರ ರೇಣುಕೇಶ್ ಜತೆ ಕುಣಿಗಲ್ ರೈಲ್ವೆ ನಿಲ್ದಾಣಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು. ತಾಳೇಕೆರೆ ಹ್ಯಾಂಡ್ ಪೋಸ್ಟ್ ಬಳಿ ಜಾನ್ಸನ್ ಹತ್ತಿರ ಆಕಸ್ಮಿಕವಾಗಿ ಬೈಕಿನಿಂದ ಜಾರಿ ಬಿದ್ದ ಆಕೆಯ ಮೇಲೆ ಹಿಂದಿನಿಂದ ಬಂದ ಕ್ಯಾಂಟರ್ ಹರಿದಿದೆ. ಮೃತಳ ಸಹೋದರ ರೇಣುಕೇಶ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಾಹನ ಚಾಲಕನನ್ನು ಬಂಧಿಸಲಾಗಿದೆ. ಮೃತ ದೇಹವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.