
ಕೋಲಾರ: 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶ್ರೀನಿವಾಸಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸಿದ್ದೇಪಲ್ಲಿ ಕ್ರಾಸ್ನ ಅಂಜಿ ಅಲಿಯಾಸ್ ರಾಮಾಂಜಿ ಬಂಧಿತ ಆರೋಪಿ. ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದಡಿ (ಎಲ್ಪಿಸಿ) ಬಂಧಿಸಲಾಗಿದೆ. ಮುಳಬಾಗಿಲು ನಗರ ಹೊರವಲಯದ ನರಸಿಂಹ ತೀರ್ಥದ ಸಮೀಪವಿರುವ ಸಿದ್ದಾರ್ಥ ನಗರದಲ್ಲಿ ಪತ್ತೆ ಹಚ್ಚಿದ್ದಾರೆ. ಶ್ರೀನಿವಾಸಪುರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಧೀಶರ ಆದೇಶದ ಮೇರೆಗೆ ಚಿಂತಾಮಣಿ ಕಾರಾಗೃಹದಲ್ಲಿ ಇರಿಸಲಾಗಿದೆ. ವಿದ್ಯುತ್ ತಂತಿ ಕಳ್ಳತನ ಸೇರಿದಂತೆ ಹಲವಾರು ಪ್ರಕರಣಗಳು ಈತನ ಮೇಲೆ ದಾಖಲಾಗಿವೆ, ಎಂದು ಪೊಲಿಸರು ಹೇಳಿದ್ದಾರೆ.