
ಚಿತ್ರದುರ್ಗ: ಮತಾಂತರದ ಪ್ರಕರಣಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಜನ ಬಂಧನಕ್ಕೆ ಒಳಪಡುತ್ತಲೂ ಇರುತ್ತಾರೆ ಆದರೆ, ಜನ ಮಾತ್ರ ಬುದ್ದಿ ಕಲೀತಾನೇ ಇಲ್ಲ. ಮತ್ತೆ ಮತ್ತೆ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಇದಕ್ಕೆ ಉದಾಹರಣೆ ಎಂಬಂತೆ ಇದೀಗ ಚಿತ್ರದುರ್ಗದಲ್ಲಿ ಮತಾಂತರ ಪ್ರಕರಣವೊಂದು ನಡೆದಿದೆ.
ಕ್ರೈಸ್ಥ ಮತಕ್ಕೆ ಮತಾಂತರ ಮಾಡಲು ಯತ್ನಿಸಿದ ಆರೋಪದಡಿ ಚಿತ್ರದುರ್ಗ ನಗರಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

j3tvkannada.in
ಚಿತ್ರದುರ್ಗದ ಪ್ರಶಾಂತ ನಗರದ ಮಾರಪ್ಪ ಎಂಬುವವರ ಮನೆಯಲ್ಲಿ 8-10 ಜನರನ್ನು ಕೂರಿಸಿಕೊಂಡು ಹಿಂದೂ ಧರ್ಮದ ಕುರಿತು ನಕಾರಾತ್ಮಕ ವಿಚಾರಗಳನ್ನು ಹೇಳುತ್ತಾ ಪ್ರಭಾವ ಬೀರುತ್ತಿದ್ದರು ಎಂದು ದೀಪಕ್ ರಾಜ್ ಎಂಬುವವರು ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ನಗರ ಠಾಣೆ ಪೊಲೀಸ್ ಸಿ.ಪಿ.ಐ ಉಮೇಶ್ ಬಾಬು ನೇತೃತ್ವದ ತಂಡ ಮತಾಂತರದ ಆರೋಪದಡಿ ಧನಂಜಯ ಹಾಗೂ ಜೋಷವಾ ಇಸ್ರೇಲ್ ಎಂಬುವವರನ್ನು ವಶಕ್ಕೆ ಪಡೆದಿದೆ.
ಆರೋಪಿತರ ವಿರುದ್ಧ Karnataka protection of right to freedom of religion Act-2022, 302, 3(5)BNS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.