
ಕಲಬುರುಗಿ: ಈ ದೇಶದ ಹಿಂದೂಗಳು ನಾವೆಲ್ಲ ಒಂದಾಗಿ ದೇಶ ಹಾಗೂ ಹಿಂದುಗಳ ರಕ್ಷಣೆಗೆ ಮುಂದಾಗಬೇಕು ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಪ್ರವೀಣ್ ಬಾಯ್ ತೊಗಾಡಿಯ ಅಭಿಮತಪಟ್ಟರು.

j3tvkannada
ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗ ದಳ ವತಿಯಿಂದ ಜರುಗಿದ ಹಿಂದೂ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು 400 ವರ್ಷಗಳಿಂದ ನಡೆಯುತ್ತಿದ್ದ ರಾಮ ಮಂದಿರ ಹೋರಾಟದ ಜಯ ಈಗಾಗಲೇ ಸಿಕ್ಕಿದೆ. ಯಾರು ಏನೇ ಹೇಳಿದರೂ ಕೂಡ ರಾಮ ಮಂದಿರ ಅದೇ ಆಯೋಧ್ಯೆಯಲ್ಲಿ ಕಟ್ಟಬೇಕೆಂಬುದು ಹಿಂದುಗಳ ಸಂಕಲ್ಪವಾಗಿತ್ತು, ಹಿಂದುಗಳು ಎಲ್ಲರೂ ಒಂದುಗೂಡಿ ಆ ಸಂಕಲ್ಪವನ್ನು ಯಶಸ್ವಿಗೊಳಿಸಿದರು ಎಂದರು. ಭಾರತದಲ್ಲಿರುವ ಬಾಂಗ್ಲಾದವರನ್ನು ಓಡಿಸಲು ನಾವೆಲ್ಲರೂ ಸಿದ್ದರಿರಬೇಕು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಆಗದಿದ್ದರೆ ಮುಂದೊಂದು ದಿನ ಹಿಂದೂಗಳು ಕಡಿಮೆಯಾಗಬೇಕಾಗುತ್ತದೆ ಎಂದರು.
ಜೇವರ್ಗಿಯಲ್ಲಿ ನಡೆದ ಹಿಂದೂ ಧರ್ಮಸಭೆಯನ್ನು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಪ್ರವೀಣ್ ಭಾಯ್ ತೊಗಾಡಿಯ ಉದ್ಘಾಟಿಸಿದರು. ಇನ್ನು ಮುಂದೆ ಪ್ರತಿ ಶನಿವಾರವೂ ಕೂಡ ದೇಶದ ಪ್ರತಿ ಗ್ರಾಮದಲ್ಲಿ ಸಾಮೂಹಿಕವಾಗಿ ಹನುಮಾನ್ ಚಾಲೀಸ್ ಪಠಣವಾಗಬೇಕು. ಹನುಮಾನ್ ಚಾಲೀಸ್ ಪಠಣ ಮಾಡುವುದರ ಮುಖಾಂತರ ಹಿಂದುಗಳ ಅಭಿವೃದ್ಧಿಯಾಗಬೇಕು.
ಗವಾನ್ ತ್ರಿವಿಕ್ರಮಾನಂದ ಸರಸ್ವತಿ ಮಹಾಸ್ವಾಮಿಗಳ ಮಠದ ಶೋತ್ರಿಯ ಬ್ರಹನಿಷ್ಠ ಪರಮ ಪೂಜ್ಯ ಶ್ರೀ ಸೋಪಾನನಾಥ ಮಾಹಾಸ್ವಾಮಿಗಳು, ತೋನಸಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು, ರಮೇಶ ಕುಲಕರ್ಣಿ, ಶಂಭುನಾಥ ಆಲಬಾಲ, ಗಂಗಾಧರ ವಿಶ್ವಕರ್ಮ,ಪ್ರತಿ ಶನಿವಾರ ಹನುಮಾನ್ ಚಾಲಿಸ್ ಪಠಣೆಯ ವಿವಾರತಮನ ಬಗಲಿನ ಒಗ್ಗೂಡಿಸಲು ಕರೆ ನೀಡಿದ ಅವರು, ಹಿಂದೂಗಳಾಗಿ ಹಿಂದೂಗಳ ಜೊತೆ ಮಾತ್ರ ವ್ಯಾಪಾರ ಮಾಡಿ, ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಿ ಎಂದು ತೋಗಾಡಿಯಾ ಸಲಹೆ ನೀಡಿದರು. ಹಿಂದೂ ಧರ್ಮದಲ್ಲಿ ಆರೋಗ್ಯ, ವಿಜ್ಞಾನ ಮತ್ತು ಧೈಯ ನಿರ್ವಹಣೆಯ ಅಂಶಗಳಿರುವುದಾಗಿ ಉಲ್ಲೇಖಿಸಿ ಅವರು, ನಿತ್ಯ ಗೋಹತ್ಯೆ ಸಂಪೂರ್ಣ ನಿಷೇಧಿಸಿ ದೇಶದ ಅನೇಕ ರಾಜ್ಯಗಳಲ್ಲಿ ಗೋಹತ್ಯೆ ಮತ್ತು ಗೋಮಾಂಸ ಸಾಗಾಣಿಕೆ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಲ್ಲಿ ಸಂಪೂರ್ಣವಾಗಿ ಗೋಹತ್ಯೆ ಮತ್ತು ಗೋಮಾಂಸ ಸಾಗಾಣಿಕೆ ನಿಷೇಧಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ನ ಸಂಸ್ಥಾಪಕ ಅಧ್ಯಕ್ಷ ಪ್ರವೀಣ್ ತೋಗಾಡಿಯಾ ಒತ್ತಾಯಿಸಿದರು.