
ಬೀದರ್: ಜಿಲ್ಲೆಯಲ್ಲಿ ಸುಮಾರು ಏಳ್ನೂರು ವರ್ಷಗಳಷ್ಟು ಪುರಾತನ ಕಾಲದ ನೂರಕ್ಕೂ ಹೆಚ್ಚು ಬಾವಿಗಳಿವೆ. ಈ ಬಾವಿಗಳು ಇನ್ನೂ ಚೆನ್ನಾಗಿದ್ದು ಈ ಐತಿಹಾಸಿಕ ಬಾವಿಗಳನ್ನು ನಿರ್ಲಕ್ಷ್ಯಸಿಲಾಗುತ್ತಿದೆ ಎಂಬುದು ಸಾರ್ವಜನಿಕರ ಅಳಲಾಗಿದೆ. ನೋಡಲು ಸುಂದರ ಅಷ್ಟೇ ಅಲ್ಲ ಎಂತಹ ಭೀಕರ ಬೇಸಿಗೆಯಲ್ಲಿಯೂ ಈ ಬಾವಿಗಳಲ್ಲಿ ನೀರು ಬತ್ತಿ ಹೋಗುವುದಿಲ್ಲ. ಆದ್ದರಿಂದ ಈ ಬಾವಿಗಳನ್ನ ಉಳಿಸಿ ಆ ನೀರನ್ನು ಸಾರ್ವಜನಿಕರ ಬಳಕೆಗೆ ಉಪಯೋಗಿಸುವ ಅನುಕೂಲತೆಗಳನ್ನು ಕಲ್ಪಿಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ.

ಅಪರೂಪದಲ್ಲಿ ಅಪರೂಪದಂತಿರುವ ಬಾವಿಯನ್ನು ಸ್ಬಚ್ಚಗೊಳಿಸಿ ಆ ನೀರಿನ್ನು ಅಕ್ಕಪಕ್ಕದ ಗ್ರಾಮಗಳಿಗೆ ನೀರಿನ ಬಳಕೆಗೆ ಅನುಕೂಲ ಕಲ್ಪಿಸಿ ಕೊಟ್ಟರೆ ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆಯನ್ನು ತಪ್ಪಿಸಬಹುದು. ಬೀದರ್ ಜಿಲ್ಲೆಯಲ್ಲಿನ ಈ ಬಾವಿಗಳು ಬಹುಮನಿ ಸುಲ್ತಾನರ ಕಾಲದ್ದಾಗಿದೆ.
ಇಲ್ಲಿನ ಬಾವಿಗಳನ್ನ ಆಗಿನ ಕಾಲದಲ್ಲಿ ವೈಜ್ಜಾನಿಕವಾಗಿ ಎಲ್ಲಿ ನೀರಿನ ಸೆಲೆ ಜಾಸ್ತಿಯಿದೆಯೋ ಅಲ್ಲಯೇ ನಿರ್ಮಾಣ ಮಾಡಿ ಸುತ್ತಮುತ್ತಲಿ ಗ್ರಾಮಗಳಿಗೆ ಇದೇ ಬಾವಿಗಳ ನೀರನ್ನ ಉಪಯೋಗಿಸುತ್ತಿದ್ದರು, ಆದರೆ ಕಾಲ ಕ್ರಮೇಣವಾಗಿ ಇಂದು ಈ ಬಾವಿಗಳನ್ನ ಸಾರ್ವಜನಿಕರು ಬಳಕೆ ಮಾಡದೆ ಇದ್ದುದರಿಂದ ಬಾವಿಗಳು ಹಾಳಾಗುತ್ತಿವೆ ಎನ್ನಲಾಗುತ್ತದೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾಗುತ್ತದೆ, ಅಂತಹ ಸಮಯದಲ್ಲಿ ಈ ಬಾವಿಗಳ ನೀರನ್ನು ಗ್ರಾಮಗಳ ಜನರಿಗೆ ಹಾಗೂ ಪ್ರಾಣಿಗಳ ದಾಹ ನಿವಾರಣೆಗೆ ಉಪಯುಕ್ತವಾಗುತ್ತದೆ. ಆದರೆ ಅದನ್ನ ಜಿಲ್ಲಾಡಳಿತ ಮಾಡುತ್ತಿಲ್ಲ, ಬದಲಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಲಕ್ಷಾಂತರ ರೂಪಾಯಿ ಹಣವನ್ನ ವೆಚ್ಚ ಮಾಡುತ್ತಿದೆ, ವಿನಃ ಪುರಾತನ ಬಾವಿಯ ನೀರನ್ನ ಬಳಕೆ ಮಾಡುವಲ್ಲಿ ವಿಫಲವಾಗಿದ್ದಾರೆ. ಇದೇ ಹಣವನ್ನ ಪುರಾತನ ಭಾವಿಯ ಹೂಳನ್ನು ತೆಗೆಸಿ ಇದೇ ಬಾವಿಯಿಂದ ಗ್ರಾಮಕ್ಕೆ ಪೈಪ್ ಲೈನ್ ಮಾಡಿಸಿ ನೀರನ್ನು ಬಳಸಿಕೊಂಡರೆ ಎಂತಹ ಬೆಸಿಗೆಯಲ್ಲಿಯೂ ಕೂಡಾ ಕೆಲವು ಗ್ರಾಮದಲ್ಲಾಗುವ ನೀರಿನ ಹಾಹಾಕಾರ ಕಡಿಮೆಯಾಗುತ್ತದೆ.
ನಗರದಲ್ಲಿನ ಪುರಾತನ ಕಾಲದ ಅನೇಕ ಬಾವಿಗಳನ್ನು ಅಭಿವೃದ್ಧಿ ನೆಪದಲ್ಲಿ ನಗರಸಭೆ ಮುಚ್ಚಿ ಕೈತೊಳೆದುಕೊಂಡಿದೆ. ಪ್ರತಿ ವರ್ಷವೂ ಕೂಡಾ ಬೆಸಿಗೆ ಕಾಲದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ, ಹೀಗಿದ್ದರೂ ಸಹ ಪುರಾತನ ಕಾಲದ ಜಲ ಮೂಲಗಳನ್ನು ಸಂರಕ್ಷಣೆ ಮಾಡಿ ಸರಿಯಾಗಿ ನಿರ್ವಹಣೆ ಮಾಡುವ ಗೋಜಿಗೆ ಹೋಗದೆ ಇರುವುದು ವಿಪರ್ಯಾಸ ಎಂದು ಇಲ್ಲಿನ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.
ಶತ ಶತಮಾನಗಳಿಂದ ಎಂದೂ ಬತ್ತದ ಐತಿಹಾಸಿಕ ಬಾವಿಗಳು ಬೀದರ್ ಜಿಲ್ಲೆಯಲ್ಲಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಆದರೇ ಇಂತಹ ಅಪರೂಪದಲ್ಲಿ ಅಪರೂಪವಾದ ಬಾವಿಗಳ ನೀರನನ್ನ ಬಳಸಿಕೊಳ್ಳುವುದರಲ್ಲಿ ನಮ್ಮ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮುಂದಾಗದಿರುವುದು ದುರಂತವೇ ಸರಿ ಎಂದು ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.