

j3tvkananda
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಹೊರ ಜಗತ್ತಿನ ಸಂಪರ್ಕಕ್ಕೆ ಈ ಮಹಿಳೆಯೇ ನಾವಿಕೆ ಆಗಿದ್ದಾರೆ. ಸೌಪರ್ಣಿಕಾ ನದಿ ಸೇತುವೆಗಾಗಿ ಊರವರಿಂದ ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಸೇತುವೆ ಮಾತ್ರ ಇನ್ನೂ ಆಗಿಲ್ಲ. ಬಾರೀ ಮಳೆಯಿಂದಾಗಿ ಜನ ಸೇತುವೆ ದಾಟಲು ಕಷ್ಟ ಪಡುತ್ತಿದ್ದಾರೆ. ಜನರ ಕಷ್ಟಗಳಿಗೆ ಈ ಮಹಿಳೆ ಸ್ಪಂದಿಸುತ್ತಿದ್ದಾರೆ.
ಇಲ್ಲಿ ಜನರು ನದಿ ದಾಟಬೇಕಾದರೆ, ಓರ್ವ ಮಹಿಳೆಯೇ ದೋಣಿಯನ್ನು ಮುನ್ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು, ಊರವರನ್ನು ಹೊರ ಜಗತ್ತಿನ ಸಂಪರ್ಕಕ್ಕೆ ತರಲು ನೆರವಾಗುತ್ತಿದ್ದಾರೆ. ಊರಿನ ಪುರುಷರು ಬೆಳಿಗ್ಗೆ ಕೆಲಸಕ್ಕೆ ಹೋಗುವುದರಿಂದ ಈ ಮಹಿಳೆಯೇ ನದಿಯಲ್ಲಿ ಶರವೇಗದಲ್ಲಿ ದೋಣಿ ನಡೆಸುವ ಮೂಲಕ ನೆರವಾಗುತ್ತಿದ್ದಾರೆ. ಸೇತುವೆಗಾಗಿ ಇಲ್ಲಿ ದಶಕಗಳಿಂದ ಹೋರಾಟ ನಡೆದಿದ್ದರೂ ಕೂಡ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾಗಿದ್ದಾರೆ.