
ಬೀದರ: ಪೌರಾಯುಕ್ತ ಶಿವರಾಜ ರಾಠೋಡ ಅವರು ಮೈಲೂರ ನಗರಕ್ಕೆ ಭೇಟಿ ನೀಡಿ ತುರ್ತಾಗಿ ಕೈಗೋಳಬೇಕಾದ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳು , ಚರಂಡಿ ಕಾಮಗಾರಿಗಳ ಸ್ಥಳವನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತ ಶಿವರಾಜ ರಾಠೋಡ ರವರಿಗೆ ಆರ್.ಪಿ.ಐ ಅಂಬೇಡ್ಕರ್ ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಶಾಲು ಹೊದಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುಸ್ತಕ ನೀಡಿ ಸನ್ಮಾನ ಮಾಡಿದರು. ಬಳಿಕ ಓಣಿಯಲ್ಲಿ ಚರಂಡಿ ಇಲ್ಲದ ಕಾರಣ ಮನೆಗಳಿಗೆ ನೀರು ಬರುತ್ತಿವೆ, ರಸ್ತೆಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಬಹಳಷ್ಟು ಸಮಸ್ಯಗಳು ಆಗುತ್ತಿವೆ ಕೂಡಲೇ ಈ ಕೆಳಕಂಡ ಕಾಮಗಾರಿಗಳು ಕೈಗೆತಿಕೊಳ್ಳಲು ಮನವಿ ಮಾಡಿದರು.

j3tvkannada.in
ಮಹೇಶ ಗೋರನಾಳಕರ್ ಮನೆಯಿಂದ ಅಂಬರೀಶ್ ಕುದರೆ ಮನೆಯವರೆಗೆ ೧೨೦ ಮೀಟರ್ ಚರಂಡಿ ನಿರ್ಮಾಣ, ದೇವೇಂದ್ರ ನರನಾಳರವರ ಮನೆಯಿಂದ ಮುತ್ತಲು ಚೆನಗೆಪಲ್ಲಿ ಮನೆಯವರೆಗೆ ೭೦ ಮೀಟರ್ ಸಿ.ಸಿ ರಸ್ತೆ, ಕಾಶಿನಾಥ ಬಡಿಗೇರ ಮನೆಯಿಂದ ಮೆಹಬೂಬ್ ಮನೆಯವರೆಗೆ ೫೦ ಮೀಟರ್ ಸಿ.ಸಿ ರಸ್ತೆ ನಿರ್ಮಾಣ, ಲಲೀತಾ ಪಂಡರಿ ಮನೆಯಿಂದ ಮಾರುತಿ ಅಮೃತ ಮನೆಯವರೆಗೆ ೨೫ ಮೀಟರ್ ಸಿ.ಸಿ ರಸ್ತೆ ನಿರ್ಮಾಣ, ಸಿ.ಎಂ.ಸಿ ಕಾಲೋನಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬೇಕೆಂದಾಗ, ಇದಕ್ಕೆ ಸ್ಪಂದಿಸಿದ ಪೌರಾಯುಕ್ತರಾದ ಶಿವರಾಜ ರಾಠೋಡರವರು ಆದಷ್ಟು ಬೇಗ ಕಾಮಗಾರಿಗಳನ್ನು ಕೈಗೆತಿಕೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಇಂಜಿನಿಯರ್ ಖಾದ್ರಿ ಸರ್, ನಾಗೇಶ ಹಾಗೂ ಸ್ಥಳೀಯ ಮುಖಂಡರಾದ ಮೊಹಮ್ಮದ್ ಖಾಜಾ, ದೇವೇಂದ್ರ ನರನಾಳ ಇನ್ನಿತರರು ಉಪಸ್ಥಿತರಿದ್ದರು.