
ಹಾಸನ:ಮೊಬೈಲ್ ಕದ್ದ ಆರೋಪಕ್ಕೆ ಹಾಸನ ಜಿಲ್ಲಾಸ್ಪತ್ರೆ ಭದ್ರತಾ ಸಿಬ್ಬಂದಿಗಳಿಂದ ಯುವಕನ ಮೇಲೆ ಅಮಾನುಷ ಹಲ್ಲೆ ನಡೆದಿರುವ ಘಟನೆ ನಡೆದಿದೆ. ಕೋಲು ಮುರಿಯುವಂತೆ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಹೊಡೆತಕ್ಕೆ ತಡೆಯದೇ ಬಿದ್ದು ಗೋಳಾಡಿದರೂ ಸಹ ಬಿಡದೆ ಹೊಡೆದಿದ್ದಾರೆ. ಇನ್ನು ಖಾಸಗಿ ವ್ಯಕ್ತಿಗಳು ಅಮಾನುಷವಾಗಿ ದಾಳಿ ಮಾಡಿದ್ರೂ ಸಹ ಪೊಲೀಸ್ ಸಿಬ್ಬಂದಿ ಸುಮ್ಮನೆ ನೋಡುತ್ತಾ ನಿಂತಿದ್ದಾರೆ. ಮಳೆಯ ನಡುವೆ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ಕರುಣೆ ತೋರದ ಕ್ರೂರಿಗಳು, ಸಮೀಪವೇ ಪೊಲೀಸ್ ಠಾಣೆ ಇದ್ದರೂ ಮಾಹಿತಿ ನೀಡದೆ ತಾವೇ ನೈತಿಕ ಪೊಲೀಸ್ ಗಿರಿ ತೋರಿಸಿದ್ದಾರೆ.

j3tvkannada
ಮೊದಲು ರೂಮ್ ನಲ್ಲಿ ಚೆನ್ನಾಗಿ ಹೊಡೆದಿದ್ದಾರೆ. ಬಳಿಕ ಹೊರಗೆ ಸಹ ಮನಸ್ಸೋ ಇಚ್ಛೇ ಆಕಡೆ ಈ ಕಡೆಯಿಂದ ಸೇರಿಕೊಂಡು ಹೊಡೆದಿದ್ದಾರೆ. ಇನ್ನೆಂದು ಹೀಗೆ ಮಾಡಲ್ಲಾ ಬಿಡಿ ಸಾರ್ ಎಂದು ಕಾಲು ಹಿಡಿದು ಬೇಡಿಕೊಂಡರೂ ಸಹ ಬಿಡದೇ ಹಲ್ಲೆ ಮಾಡಿದ್ದಾರೆ. ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ತಪ್ಪು ಮಾಡಿದರೆ ಪೊಲೀಸ್, ಕಾನೂನು ಇದೆ. ಆದ್ರೆ ಈ ರೀತಿ ಅಮಾನುಷವಾಗಿ ನಡೆದುಕೊಂಡಿದ್ದುಎಷ್ಟು ಎನ್ನುವ ಸರಿ ಎಂಬ ಪ್ರಶ್ನೆ ಉದ್ಭವಿಸಿದೆ.