
ಕೊಪ್ಪಳ: ತಾಲೂಕಿನ ಮುತ್ತಾಳ, ಶಿರೂರು, ಬೆದವಟ್ಟಿ ಗ್ರಾಮಗಳಲ್ಲಿ ಮುಂಗಾರು ಬಿತ್ತನೆಗೆ ಬೀಜಗಳ ಆಯ್ಕೆ ಮತ್ತು ಬಿತ್ತನೆಗೆ ಮುನ್ನ ಕೈಗೊಳ್ಳಬೇಕಾದ ಬೀಜೋಪಚಾರ ಕುರಿತು ರೈತರಿಗೆ ಸಮಗ್ರ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಲಾಯಿತು.

j3tvkannada
ಗಂಗಾವತಿ ಕೃಷಿ ವಿಜ್ಞಾನಿ ಡಾ. ಜ್ಯೋತಿ ಮಾತನಾಡಿ, ರೈತರು ತಮ್ಮ ಜಮೀನಿನ ಮಣ್ಣಿನ ಗುಣ, ನೀರಿನ ಲಭ್ಯತೆಯ ಅನುಸಾರವಾಗಿ ಸೂಕ್ತ ತಳಿಯ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿತ್ತನೆಗೂ ಮುಂಚೆ ಬೀಜಗಳನ್ನು ಸದೃಢವಾಗಿರಿಸಲು ಹಾಗೂ ಬಿತ್ತನೆಯ ನಂತರ ಬರಬಹುದಾದ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಜೈವಿಕ ಗೊಬ್ಬರವನ್ನು ಬಳಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.
ಕೃಷಿ ಅಧಿಕಾರಿ ನಿಂಗಪ್ಪ ಹಿರೇಹಾಳ, ಗೃಹ ವಿಜ್ಞಾನಿ ಕವಿತ ಉಳ್ಳಿಕಾಶಿ, ತಾಂತ್ರಿಕ ವ್ಯವಸ್ಥಾಪಕ ಚನ್ನಬಸವನಗೌಡ, ಗವಿಸಿದ್ದಪ್ಪ ವಾಲಿ, ಶೇಖರೆಡ್ಡಿ ಮದಿನೂರ್, ವೀರಣ್ಣ, ರಾಮಣ್ಣ ಹಂಚಿನಾಳ, ಮಹೇಶ್ ಮುಂತಾದವರು ಇದ್ದರು.