
ಉಡುಪಿ: ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಗೆ ಈ ಬಾರಿ ಅವಧಿ ಪೂರ್ವದಲ್ಲಿ ನಿರಂತರ ಮಳೆ ಸುರಿದ ಕಾರಣ ಇಳುವರಿಯಲ್ಲಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ. ಕೆಲ ದಿನಗಳ ಕಾಲ ಭಾರಿ ಮಳೆ ಸುರಿದ ಕಾರಣ ಅಡಿಕೆಯ ಹಿಂಗಾರದಲ್ಲಿ ನೀರು ನಿಂತು ಕೊಳೆತು ಹೋಗಿ, ನಳ್ಳಿ ಉದುರಿ ಹೋಗಿದೆ ಎಂದು ಬೆಳೆಗಾರರು ಅಳಲು ತೋಡಿಕೂಂಡಿದಾರೆ.

j3tvkannada
ಜಿಲ್ಲೆಯಲ್ಲಿ ಕಾರ್ಕಳ ಸೇರಿದಂತೆ ವಿವಿಧ ಭಾಗದಲ್ಲಿ ಅಡಿಕೆ ಕೃಷಿ ಮಾಡಲಾಗುತ್ತಿದೆ. ಬಯಲು ಪ್ರದೇಶ ಮತ್ತು ಗುಡ್ಡ ಪ್ರದೇಶಗಳಲ್ಲೊ ಅಡಿಕೆ ಕೃಷಿ ಮಾಡಲಾಗುತ್ತಿದೆ. ಇವುಗಳಲ್ಲಿ ಬಯಲು ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ಮೊದಲಾದವುಗಳು ಹೆಚ್ಚಾಗಿ ಕಾಡುತ್ತಿರುತ್ತವೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಗಾರು ಆರಂಭವಾಗುವುದರಿಂದ ಮೇ ತಿಂಗಳ ಕೊನೆಯವರೆಗೊ ಅಡಿಕೆ ಮರಗಳಲ್ಲಿ ಹಿಂಗಾರ ಹಿಡಿಯುತ್ತಿದೆ. ಆದರೆ ಈ ಬಾರಿ ಮೇ ತಿಂಗಳ ಮದ್ಯಭಾಗದಲ್ಲಿ ಸುಮಾರು ೧೦ ದಿನಗಳವರಗೆ ನಿರಂತರವಾಗಿ ಮಳೆ ಸುರಿದ ಕಾರಣ ಹಿಂಗಾರಕ್ಕೆ ಹಾನಿಯಾಗಿದೆ ಎನ್ನುತ್ತಾರೆ ರೈತರು.
ಅಡಿಕೆಗೆ ಕೊಳೆರೋಗ ಬಾರದಿರಲು ಜೂನ್ ೧೫ ರ ನಂತರ ಸಾಮಾನ್ಯವಾಗಿ ಬೋರ್ಡೋದ್ರಾವಣ ಸಿಂಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯ ಬಹುತೇಕ ರೈತರು ಈಗಾಗಲೇ ಬೋರ್ಡೋದ್ರಾವಣವನ್ನು ಸಿಂಪಡಿಸಿದ್ದಾರೆ. ಬಯಲು ಪ್ರದೇಶದಲ್ಲಿ ಅಡಿಕೆ ತೋಟ ಹೊಂದಿರುವವರು ಮಳೆಗಾಲದಲ್ಲಿ ಎರಡು ಬಾರಿ ಸಿಂಪಡಿತ್ತಾರೆ ಎನ್ನುತ್ತಾರೆ ಕಾರ್ಕಳದ ಕಾಂತಾವರದ ರೈತ ಶ್ರೀಧರ್ ಪೂಜಾರಿ.

j3tvkannada
ಪ್ರತಿವರ್ಷ ನಾವು ಜೊನ್ತಿಂಗಳ ಕೊನೆಗೆ ಅಡಿಗೆ ಗೊನೆಗೆ ಬೋರ್ಡೋದ್ರಾವಣ ಸಿಂಪಡಿಸುತ್ತಿದ್ದೆವು. ಈ ಬಾರಿ ಈಗಲೇ ಬೋರ್ಡೋದ್ರಾವಣ ಸಿಂಪಡಿಸಲು ಆರಂಭಿಸಿದ್ದೇವೆ. ಈ ಬಾರಿ ಮೇ ತಿಂಗಳಲ್ಲಿ ಮಳೆ ಸುರಿದ ಕಾರಣ ಕೊಯ್ದ ಅಡಿಕೆಯನ್ನು ಒಣಗಿಸಲು ಕೊಡ ಸಮಸ್ಯೆಯಾಗಿತ್ತು. ಅಡಿಕೆಯು ಸರಿಯಾಗಿ ಒಣಗದಿದ್ದರೆ ಅದರ ಗುಣಮಟ್ಟ ಕುಸಿದು ದರ ಕಡಿಮೆಯಾಗುತ್ತದೆ ಎನ್ನುತ್ತಾರೆ.
ಎಂಟು ದಿವಸ ಒಣಗಿಸಿದ ನಂತರ ಅಡಿಕೆ ಮಳೆಗೆ ಒದ್ದೆಯಾದರೆ ಅದರ ಬಣ್ಣ ಮಸುಕಾಗಿ ಗುಣಮಟ್ಟ ಕುಸಿಯುತ್ತದೆ. ಜೋರು ಮಳೆ ಸುರಿದ ಕಾರಣ ಡ್ರೈಯರ್ಗಳಲ್ಲೂ ಅಡಿಕೆ ಒಣಗಿಸಲು ಸಮಸ್ಯೆಯಾಗಿತ್ತು ಎಂದು ಅವರು ತಿಳಿಸಿದರು. ಈ ಬಾರಿ ಮೇ ತಿಂಗಳ ಕೊನೆಗೆ ಬಿಡುವ ಅಡಿಕೆ ಹಿಂಗಾರ ಮಳೆಯಿಂದಾಗಿ ನಷ್ಟವಾಯಿತು. ಮೇ ತಿಂಗಳಲ್ಲಿ ಬಿಡುವ ಹಿಂಗಾರವು ಬಲಿತು ಜನವರಿ ತಿಂಗಳಲ್ಲಿ ಕೊಯ್ಲಿಗೆ ಬರುತ್ತಿತ್ತು ಎಂದು ಅವರು ಹೇಳಿದರು.
ಜೋರು ಮಳೆ ಬಂದ ಬಳಿಕ ಬಸವನ ಹುಳುಗಳ ಕಾಟದಿಂದಲೂ ಅಡಿಕೆಯ ಹಿಂಗಾರಕ್ಕೆ ಹಾನಿಯಾಗುತ್ತದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ತೇವಾಂಶ ಹೆಚ್ಚಿರುವ ಕಾರಣ ಕೊಳೆರೋಗ ತಡೆಗಾಗಿ ಜೂನ್ ಆರಂಭದಲ್ಲೇ ಬೋರ್ಡೋ ದ್ರಾವಣ ಸಿಂಪಡಿಸುತ್ತೇವೆ. ಆದರೆ ಈ ಸಲ ಹೆಚ್ಚಿನ ಅಡಿಕೆ ಬೆಳೆಗಾರರು ಈಗಾಗಲೇ ಸಿಂಪಡಿಸಿದ್ದಾರೆ ಎಂದು ಕಾರ್ಕಳದ ಈದುವಿನ ಅಡಿಕೆ ಬೆಳೆಗಾರ ಶೈಲೇಶ್ ಮರಾಠ ತಿಳಿಸಿದರು.