
ಬಳ್ಳಾರಿ: ಸುಪ್ರೀಂ ಕೋರ್ಟಿನ ಆದೇಶದಂತೆ ದೇಶದಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ವಿನಾಯ್ತಿ ಇಲ್ಲ. ಬೇಸಿಗೆ ಬಿಸಿಲೆಂದು ಬಳ್ಳಾರಿಗೂ ವಿನಾಯ್ತಿ ಇಲ್ಲ. ಅದಕ್ಕಾಗಿ ಜಿಲ್ಲೆಯಲ್ಲಿ ಎಲ್ಲಾ ಬೈಕ್ ಸವಾರರು ಹೆಲ್ಮೆಟ್ ಹಾಕಲೇ ಬೇಕು ಎಂದು ಎಸ್ಪಿ ಡಾ. ಶೋಭಾರಾಣಿ ಹೇಳಿದ್ದಾರೆ.

j3tvkannada
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಹೆಲ್ಮೆಟ್ ಧರಿಸದೇ ಇರುವ ಸವಾರರೇ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೆ ಅತಿ ವೇಗ ಮತ್ತಿತರ ಕಾರಣಗಳಿಂದಲೂ ಅಪಘಾತ ಆಗುತ್ತಿವೆ. ಅದಕ್ಕಾಗಿ ಹೆಲ್ಮೆಟ್ ಕಡ್ಡಾಯ ಮಾಡಿದ್ದೇವೆ. ಯಾವುದೇ ಒತ್ತಡಗಳಿಗೆ ಮಣಿಯದೆ ಇದನ್ನು ಜಾರಿಗೆ ತಂದಿದ್ದೇವೆ. ಎಲ್ಲರು ಹೆಲ್ಮೆಟ್ ಬಳಸಬೇಕು. ಮತ್ತು ಎಲ್ಲಾ ಇಲಾಖೆಗಳ ನೌಕರರಿಗೂ ಅರಿವು ಮೂಡಿಸಲು ಈ ಸಭೆ ನಡೆಸಿದ್ದೇವೆ. ಯಾರು ಹೆಲ್ಮೆಟ್ ಬಳಸಲ್ಲ ಅವರಿಗೆ 500 ರೂ ದಂಡ ಹಾಕುತ್ತೇವೆ ಎಂದು ತಿಳಿಸಿದರು.
ಸಂಚಾರಿ ಪೊಲೀಸರ 7 ಜನರ ಬಳಿ ಬಾಡಿಕ್ಯಾಮ್ ಇದೆ ಅದನ್ನು ಉಪಯೋಗಿಸುತ್ತಿದ್ದಾರೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದವರ ಮೇಲೆ ನಿರಂತರವಾಗಿ ಪ್ರಕರಣ ದಾಖಲಿಸಲಾಗುತ್ತದೆ. ಕಳೆದ 2022 ರಲ್ಲಿ 13196 ಪ್ರಕರಣ ದಾಖಲಿಸಿದ್ದರೆ 23 ರಲ್ಲಿ6971, 2024 ರಲ್ಲಿ 6557 ಮತ್ತು 2025 ರಲ್ಲಿ ಕಳೆದ ಎಪ್ರಿಲ್ ವರೆಗೆ 2655 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದೆಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಎಸ್ಪಿ ರವಿಕುಮಾರ್, ನಟರಾಜ್ ಟ್ರಾಫಿಕ್ ಇನ್ಸ್ ಪೆಕ್ಟರ್ ಅಯ್ಯನಗೌಡ ಇದ್ದರು.