
ಬೀದರ್: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬಲಿಗೆ ಸಿದ್ಧವಾಗಿದ್ದ 40ಕ್ಕೂ ಅಧಿಕ ಗೋವುಗಳನ್ನು ಬಿ.ಜೆ.ಪಿ ಶಾಸಕ ಶರಣು ಸಲಗರ್ ರಕ್ಷಿಸಿದ್ದಾರೆ.

j3tvkannada
ಬಸವ ಕಲ್ಯಾಣ ಪಟ್ಟಣದ ಮಹಿಬೂಬ್ ಗಲ್ಲಿಯಲ್ಲಿ ಗೋವುಗಳನ್ನು ಅಕ್ರಮವಾಗಿ ಇರಿಸಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶರಣು ಸಲಗರ್ ಇಂದು ಬೆಳಗ್ಗೆ ಶೆಡ್ ಮೇಲೆ ದಾಳಿ ಮಾಡಿದ್ದಾರೆ.
ದಾಳಿಯ ವೇಳೆ ಗೋಮಾಂಸ ಪತ್ತೆಯಾಗಿದೆ. ನಿಮ್ಮ ಕುಮ್ಮಕ್ಕಿನಿಂದಲೇ ಗೋವುಗಳ ಹತ್ಯೆ ನಡೆಯುತ್ತಿದೆ. ಧಮ್ ಇದ್ದರೆ ಇಲ್ಲಿಗೆ ಬಾರೋ ಎಂದು ಕಾಂಗ್ರೆಸ್ ಮುಖಂಡ ವಿಜಯ್ ಸಿಂಗ್ಗೆ ಸಲಗಾರ್ ಸವಾಲು ಎಸೆದಿದ್ದಾರೆ.
ನಾನು ಇರುವವರೆಗೂ ಗೋವುಗಳ ಬಲಿ ಕೊಡಲು ಬಿಡಲ್ಲ. ಯಾರು ಯಾವುದಕ್ಕೆ ಭಯ ಪಡುವ ಅಗತ್ಯವಿಲ್ಲ. ಯಾರಿಗೂ ಹೆದರಿ ಕೆಲಸ ಮಾಡಬೇಡಿ ಎಂದು ಪೊಲೀಸರಿಗೆ ಹೇಳಿದ್ದಾರೆ.