
ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ 371ನೇ(ಜೆ) ಕಲಂ ಜಾರಿಯಾಗಿರುವ ದಿನ ಸ್ವತಂತ್ರ ದಿನಾಚರಣೆ, ನಾಡ ಹಬ್ಬ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಸಮನಾಗಿ ಐತಿಹಾಸಿಕ ದಿನಾಚರಣೆಯಾಗಿರುವುದರಿಂದ, ಈ ದಿನಾಚರಣೆ ಕಲ್ಯಾಣದ ಪ್ರತಿಯೊಬ್ಬ ನಾಗರಿಕರು ಮನವರಿಕೆ ಮಾಡಿಕೊಂಡು ಪ್ರತಿ ವರ್ಷ ಆಚರಣೆ ಮಾಡುವ ಮುಖಾಂತರ ನಮ್ಮ ಪ್ರಗತಿಯ ಅವಲೋಕನ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಡಾ. ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.

j3tvkannada
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಈಗಾಗಲೇ ನಿರ್ಧರಿಸಿರುವಂತೆ 371ನೇ(ಜೆ) ಕಲಂ ದಶಮಾನೋತ್ಸವ ಆಚರಣೆಗೆ ಸಂಬಂಧಿಸಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪ್ರಮುಖ ಮುಖಂಡರ ಸಭೆಯನ್ನು ಶರಣಬಸವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಮಿತಿಯ ಗೌರವ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಬಸವರಾಜ ದೇಶಮುಖ ರವರು ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ಸ್ವತಂತ್ರಕ್ಕಾಗಿ, ಹೈದ್ರಾಬಾದ ಸಂಸ್ಥಾನದಿಂದ ವಿಮೋಚನೆಗಾಗಿ, ಕರ್ನಾಟಕ ಏಕಿಕರಣಕ್ಕಾಗಿ ಚಳುವಳಿಗಳು ನಡೆದಿದ್ದು ಐತಿಹಾಸಿಕವಾಗಿರುವಂತೆ 371ನೇ(ಜೆ) ಕಲಂ ಜಾರಿಗೆ ದೀರ್ಘಕಾಲದ ವರೆಗೆ ಚಳುವಳಿ ನಡೆಸಿ ಸರಕಾರದ ಗಮನಕ್ಕೆ ತಂದಿರುವುದು ಅದರಂತೆ, ಕೇಂದ್ರ ಸರಕಾರ ಮತ್ತು ನಮ್ಮ ನಾಯಕರ ಬಲವಾದ ರಾಜಕೀಯ ಇಚ್ಛಾಶಕ್ತಿಯಿಂದ ಸಂವಿಧಾನಬದ್ಧ ಸ್ಥಾನಮಾನ ಜಾರಿ ಮಾಡಿರುವುದು ಮಹತ್ತರ ಐತಿಹಾಸಿಕ ದಿನವೆಂಬುದು ಕಲ್ಯಾಣದ ಜನಮಾನಸ ಅರ್ಥ ಮಾಡಿಕೊಳ್ಳುವುದು ಅತಿ ಅವಶ್ಯವಾಗಿದೆ.
ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಲಕ್ಷ್ಮಣ ದಸ್ತಿಯವರು ಮಾತನಾಡಿ ಸಮಿತಿ ಈಗಾಗಲೇ ಹಮ್ಮಿಕೊಂಡಿರುವ ರೂಪರೇಷೆಗಳಂತೆ ಬರುವ ದಿನಗಳಲ್ಲಿ ಕಲಬುರಗಿಯ ಖ್ವಾಜಾ ಬಂದೇನವಾಜನ ಸಜ್ಜಾದರವರ್ ನೇತೃತ್ವದಲ್ಲಿ ಸಭೆ ನಡೆಸಿ ನಂತರ ಬೀದರ, ಯಾದಗಿರ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಭೆಗಳನ್ನು ಆಯೋಜಿಸಿ ಆದಷ್ಟು ಶೀಘ್ರ ವಿಚಾರ ಸಂಕಿರಣಗಳನ್ನು ನಡೆಸುವ ಬಗ್ಗೆ ಏಳು ಜಿಲ್ಲೆಗಳ ಮುಖಂಡರಲ್ಲಿ ಮನವರಿಕೆ ಮಾಡಿ ಇದಕ್ಕೆ ಕಲ್ಯಾಣದ ಎಲ್ಲಾ ಕ್ಷೇತ್ರದ ಗಣ್ಯರು ಸಹಕರಿಸಲು ಕೋರಿದರು.

j3tvkannada
ಹಿರಿಯ ಚಿಂತಕರಾದ ಪ್ರೊಫೆಸರ್. ಆರ್.ಕೆ. ಹುಡಗಿರವರು ಮಾತನಾಡಿ, ಪಕ್ಷಾತೀತವಾಗಿ ನಡೆಯುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಕ್ಷೇತ್ರದ ಗಣ್ಯರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸ್ಪಂದಿಸಿ ಸಹಕರಿಸುತ್ತಿರುವುದು ಸ್ವಾಗತಾರ್ಹವಾದ ವಿಷಯವಾಗಿದೆ. ವಿಶ್ರಾಂತ ಕುಲಪತಿಗಳಾದ. ಪ್ರೊಫೆಸರ್ ಪ್ರತಾಪಸಿಂಗ್ ತಿವಾರಿಯವರು ಮಾತನಾಡಿ, 371ನೇ(ಜೆ) ಕಲಂ ದಶಮಾನೋತ್ಸವ ಅಂಗವಾಗಿ ಏಳು ಜಿಲ್ಲೆಗಳಲ್ಲಿ ನಡೆಯುವ ವಿಚಾರ ಸಂಕಿರಣಗಳಲ್ಲಿ ವಿಶೇಷ ಸ್ಥಾನಮಾನದ ಅವಲೋಕನಗಳ ಜೊತೆಗೆ ಇದಕ್ಕಾಗಿ ಧ್ವನಿ ಎತ್ತಿದ ಹೋರಾಟಗಾರರಿಗೆ ಸ್ಮರಿಸುವುದರ ಜೊತೆಗೆ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿರುವ ರೂವಾರಿಗಳಿಗೆ ಬದ್ಧತೆಯ ಇತಿಹಾಸ ಜನಮಾನಸಕ್ಕೆ ಗೊತ್ತಾಗುವಂತೆ ವ್ಯಾಪಕ ಪ್ರಚಾರ ಮಾಡುವುದು ಅತಿ ಅವಶ್ಯವಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಪನ್ನಾ ರಾಜು ರವರು ಮಾತನಾಡಿ 371ನೇ(ಜೆ) ಕಲಂ ಕಲ್ಯಾಣದ ಅಭಿವೃದ್ಧಿಗೆ ಬಲವಾದ ಅಸ್ತ್ರವಾಗಿದೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಸರಕಾರದಿಂದ ಇನ್ನೂ ಬಹಳಷ್ಟು ಕೆಲಸಗಳು ಆಗಬೇಕು. ಇದಕ್ಕಾಗಿ ಹೋರಾಟ ಸಮಿತಿ ಸರಕಾರದ ಮೇಲೆ ಬಲವಾದ ಒತ್ತಡ ತರುವ ಬಗ್ಗೆ ಆಗ್ರಹಿಸಿದರು. ಬೀದರ ಜಿಲ್ಲೆಯ ಮುಖಂಡರಾದ ಪಂಡಿತರಾವ ಚಿದ್ರಿ ಮಾತನಾಡಿ ವಿಶೇಷ ಸ್ಥಾನಮಾನದ ದಶಮಾನೋತ್ಸವ ಇದು ಕೇವಲ ಉತ್ಸವವಲ್ಲ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜಾಗೃತಿಯ ಪ್ರತೀಕವಾಗಿರುವ ಸಮಾವೇಶವಾಗಿದ್ದು, ಕೇಂದ್ರ ಸಮಿತಿಯ ನಿರ್ಣಯದಂತೆ ಬೀದರ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನವನ್ನು ನಡೆಸಲಾಗುವುದು ಎಂದರು.

j3tvkannada
ಯಾದಗಿರ ಜಿಲ್ಲೆಯ ಮುಖಂಡರಾದ, ಭೀಮಾನಾಯಕ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ದಶಮಾನೋತ್ಸವ ಅಂಗವಾಗಿ ಇದಕ್ಕೆ ಪೂರ್ವಭಾವಿಯಾಗಿ ನಡೆಸುತ್ತಿರುವ ವಿಚಾರ ಸಂಕಿರಣಗಳು ವಿದ್ಯಾರ್ಥಿ ಯುವಕರಿಗೆ 371ನೇ(ಜೆ) ಕಲಂ ಜಾರಿಯ ಹೋರಾಟ ಮತ್ತು ಇದರ ಲಾಭಗಳ ಬಗ್ಗೆ ಮನವರಿಕೆಯಾಗುವುದರಿಂದ ಯಾದಗಿರಿ ಜಿಲ್ಲೆಯಲ್ಲಿ ಇದರ ಜಾಗೃತಿ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಸುವುದು ಅತಿ ಅವಶ್ಯವಾಗಿದ್ದು, ಇದಕ್ಕೆ ಎಲ್ಲಾ ಕ್ಷೇತ್ರದ ಗಣ್ಯರ ಸಹಕಾರದಿಂದ ಯಶಸ್ವಿಗೊಳಿಸಲಾಗುವದು ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆಯ ಪ್ರೊಫೆಸರ್ ಎಸ್.ಎಸ್. ಪಾಟೀಲರವರು ಮಾತನಾಡಿ 371ನೇ(ಜೆ) ಕಲಂ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಹೋರಾಟ ಸಮಿತಿಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ವಿಶ್ವವಿದ್ಯಾಲಯ, ಕಾಲೇಜುಗಳಿಗೆ ಕಳುಹಿಸಿ ಶಿಕ್ಷಕರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳುವ ಬಗ್ಗೆ ತಿಳಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕ್ರೀಯಾ ಸಮಿತಿಯನ್ನು ರಚಿಸಲು ಸಮಿತಿಯ ಗೌರವ ಅಧ್ಯಕ್ಷರಿಗೆ ಮತು ಸಂಸ್ಥಾಪಕ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ನೀಡಬೇಕೆಂದು ಬೀದರ ಜಿಲ್ಲೆಯ ಮುಖಂಡರಾದ ಅಬ್ದುಲ ಮನ್ನನ್ ಸೇಠರವರು ಮಂಡಿಸಿದರು ಇದಕ್ಕೆ ಸರ್ವಾನುಮತದಿಂದ ಎಲ್ಲರೂ ಅನುಮೋದಿಸಿದರು. ಬೀದರ ಜಿಲ್ಲೆಯ ಯುವ ಮುಖಂಡರಾದ ವಿನಯ ಮಾಳಗೆ ಮಾತನಾಡಿ, 371ನೇ(ಜೆ) ಜಾರಿ ದಿನಾಚರಣೆ ಪ್ರತಿ ವರ್ಷ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಆಚರಣೆ ಮಾಡುವ ನಿಟ್ಟಿನಲ್ಲಿ ಹೋರಾಟ ಸಮಿತಿ ನಿರ್ಧರಿಸಬೇಕೆಂದು ಸಭೆಗೆ ಆಗ್ರಹಿಸಿದರು.
ಸಭೆಯಲ್ಲಿ ಪರಿಣಿತರು ಮತ್ತು ಮುಖಂಡರಾದ. ಡಾ. ಬಸವರಾಜ ಕುಮನೂರ, ಲಿಂಗರಾಜ ಸಿರಗಾಪೂರ, ಡಾ. ಸೈಯದ ಸನಾವುಲ್ಲ, ಡಾ.ಬಿ.ಎಸ್. ಗುಲಶೆಟ್ಟಿ, ಡಾ. ವೀರಶೆಟ್ಟಿ, ಕೈಲಾಸನಾಥ ದೀಕ್ಷೀತ, ಎಂ.ಬಿ. ನಿಂಗಪ್ಪ, ಕಲ್ಯಾಣರಾವ, ಅಸ್ಲಂ ಚೌಂಗೆ ಸೇರಿದಂತೆ ಅನೇಕರು ಮಾತನಾಡಿದರು. ಎಲ್ಲರ ಸಹಮತಿಯಂತೆ ಖ್ವಾಜಾ ಬಂದೇನವಾಜ ವಿಶ್ವವಿದ್ಯಾಲಯದಲ್ಲಿ ಜರುಗುವ ಸಭೆಯಲ್ಲಿ ವಿಚಾರ ಸಂಕಿರಣಗಳ ದಿನಾಂಕ ನಿಗದಿ ಮಾಡಲು ನಿರ್ಧರಿಸಲಾಯಿತು.
ಈ ಸಭೆಯಲ್ಲಿ ಭೀಮಶೆಟ್ಟಿ ಮುಕ್ಕಾ, ಸಂಧ್ಯಾರಾಜ, ವಿಷ್ಣು ಜೈನ್, ಮೋಹನ ಎಂ., ರಾಜಪ್ಪ ಬೀದರ, ಮಾದಪ್ಪ ಬೀದರ, ಚಂದ್ರಶೇಖರ ಪಾಟೀಲ ಬೀದರ, ಹಾಜಿ ರಿಜ್ವಾನ ಸಿದ್ದೀಖಿ, ನಾಗೇಂದ್ರ ಗೌಡ, ರೋಹನಕುಮಾರ ಬೀದರ, ಮಹೇಶ, ರಾಜು ಜೈನ್, ಮುತ್ತಣ್ಣ ಎಸ್. ನಾಡಗೇರಿ, ಶರಣಪ್ಪ ಕುರಿಕೋಟಿ, ಬಾಬಾ ಫಕ್ರೋದ್ದೀನ್, ಮಹೇಶ ದೇಶಪಾಂಡೆ, ರಾಘವೇಂದ್ರ ಜೆ. ಕುಲಕರ್ಣಿ, ಧರ್ಮರಾಜ ಪಾಟೀಲ, ಗೋವಿಂದ ಚೌವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.