
ತುಮಕೂರು:ತುಮಕೂರು ಬಳಿ ಭೀಕರ ಅಪಘಾತದಲ್ಲಿ ಒಂದೇ ಬೈಕಿನಲ್ಲಿ ತೆರಳುತ್ತಿದ್ದ ಮೂವರು ವಾಚ್ ಮನ್ ಗಳು ಸಾವಿಗೀಡಾಗಿದ್ದಾರೆ. ತುಮಕೂರು ತಾಲೂಕಿನ ಡಾಬಸ್ ಪೇಟೆ ಪ್ರಾಂತ್ಯದ ನಂದಿ ಹಳ್ಳಿ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಈ ಮೂವರೂ ಬರುತ್ತಿದ್ದ ಬೈಕ್, ಕಂಟೈನರ್ ಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

j3tvkannada
ತುಮಕೂರು ತಾಲೂಕಿನ ನಂದಿಹಳ್ಳಿ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ. ಕಂಟೇನರ್ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ತುಮಕೂರು ಮೂಲದ ರಾಜೇಶ್ (25) ದನಂಜಯ್ (27) ಅವರು, ಧನುಷ್ (23) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಮೂವರೂ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.
ದಾಬಸ್ ಪೇಟೆ ಎಂ.ಇ.ಸೋಲಾರ್ ಪ್ಲಾಂಟ್ ನಲ್ಲಿ ಈ ಮೂವರೂ ವಾಚ್ ಮ್ಯಾನ್ ಗಳಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿಯ ಕೆಲಸ ಮುಗಿಸಿ ಈ ಮೂವರೂ ಒಂದೇ ಬೈಕಿನಲ್ಲಿ ಮನೆಗಳಿಗೆ ಹೋಗುವಾಗ ಈ ಅಪಘಾತವಾಗಿದೆ. ಸ್ಥಳಕ್ಕೆ ಎ.ಎಸ್ಫಿ ಗೋಪಾಲ್ , ಡಿ.ವೈ.ಎಸ್ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಸಿ.ಪಿ.ಐ ರಾಮ್ ಪ್ರಸಾದ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.