

j3tvkannada
ವಿಜಯಪುರ: ಬಿ.ಜೆ.ಪಿ.ಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ನಡುವೆ ಉತ್ತಮ ಸ್ನೇಹವಿರುವಂತಿದೆ. ಇವರಿಬ್ಬರು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದ ಸಂದರ್ಭಗಳು ವಿರಳ. ನಿನ್ನೆ ವಿಜಯಪುರದ ಸಿದ್ದೇಶ್ವರ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಯತ್ನಾಳ್, ಸಚಿವ ಪಾಟೀಲ್ರನ್ನು ಮನಸಾರೆ ಹೊಗಳಿದರು. ಅವರನ್ನು ಆಧುನಿಕ ಭಗೀರಥ ಎಂದು ಗೌರವಿಸಿರುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ, ಈ ಹಿಂದೆ ನೀರಾವರಿ ಸಚಿವರಾಗಿದ್ದಾಗ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ವಿಜಯಪುರ ನಗರದ ಅಭಿವೃದ್ಧಿಗೂ ಅವರ ಕಾಣಿಕೆ ದೊಡ್ಡದು ಎಂದು ಯತ್ನಾಳ್ ಹೇಳಿದರು.