

j3tvkananda
ಚಿತ್ರದುರ್ಗ: ಮೊಳಕಾಲ್ಮೂರು ಕ್ಷೇತ್ರರ ಶಾಸಕ ಎನ್ .ವೈ ಗೋಪಾಲಕೃಷ್ಣ ಅವರಿಗೂ ಮಂತ್ರಿಯಾಗುವಾಸೆ. ತಮ್ಮ ಕ್ಷೇತ್ರದ ನಾಯಕನ ಹಟ್ಟಿಯಲ್ಲಿ ಕಟ್ಟಡವೊಂದರ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತಾಡಿರುವ ಅವರು ಏಳು ಬಾರಿ ಶಾಸಕನಾಗಿರುವ ತನ್ನ ಹಿರಿತನವನ್ನು ಗಮನಿಸಿ ಸಚಿವ ಸ್ಥಾನ ನೀಡಬೇಕೆಂದು ಅವರು ಹೇಳಿದರು.
ನನ್ನ ಸಾಮರ್ಥ್ಯ ಕ್ಷಮತೆ ಮತ್ತು ಯೋಗ್ಯತೆ ಹೈಕಮಾಂಡ್ಗೆ ಗೊತ್ತಿದೆ. ನನ್ನನ್ನು ಆಯ್ಕೆ ಮಾಡುವ ಜನ ಮಂತ್ರಿಯಾಗಿ ಕೆಲಸ ಮಾಡುವುದನ್ನು ನೋಡಲು ಉತ್ಸುಕರಾಗಿದ್ದಾರೆ ಮೂರನೇ ಸಲ ಶಾಸಕನಾಗಿ ಆಯ್ಕೆಯಾದರೆ ಮಂತ್ರಿ ಮಾಡುವ ಪರಿಪಾಠ ಮಾಯವಾಗಿರುವುದಕ್ಕೆ ಬೇಸರವಿದೆ ಎಂದು ಶಾಸಕರು ಹೇಳಿದರು. ನನ್ನ ಬುದ್ದಿವಂತಿಗೆ ಮತ್ತು ಹಿರಿತನವನ್ನು ಗಮನಿಸಿ ನನಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಗೋಪಾಲಕೃಷ್ಣ ಅವರು ಹೇಳಿದ್ದಾರೆ.