
ಬಳ್ಳಾರಿ: ಕೆಲವು ಕಡೆಗಳಲ್ಲಿ ರೈತರು ಹೊಂಡಗಳನ್ನು ಮಾಡಿಡುತ್ತಾರೆ. ಮುಚ್ಚಲು ಬೇಜವಾಬ್ದಾರಿ ತೋರುತ್ತಾರೆ. ಬಳಿಕ ಅದರಿಂದಲೇ ಪ್ರಾಣ ಹೋಗುವ ಸಂದರ್ಭಗಳು ಬರುತ್ತವೆ. ಇದಕ್ಕೆ ಉದಾಹರಣೆಯೇ ಈ ಘಟನೆ. ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ನಡೆದಿದೆ.
ವೀರೇಶ್ (13) ಮೃತ ಬಾಲಕ. ಕುರಿ ಮೇಯಿಸಿಲು ಹೋಗಿದ್ದ ವೀರೇಶ್ ನೀರು ಕುಡಿಯಲು ಹೋಗಿ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ.

j3tvkannada
ಸದ್ಯ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಾಲಕ ವೀರೇಶ್ ಮೃತ ದೇಹವನ್ನು ಕೃಷಿ ಹೊಂಡದಿಂದ ಹೊರ ತೆಗೆದಿದ್ದಾರೆ. ಘಟನೆ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.