
ಕೊಡಗು: ವಯಸ್ಸಾಗಿದ್ದರೂ ಮದುವೆ ಆಗದಿರುವುದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ. ಮೃತನನ್ನು ಮಡಿಕೇರಿ ತಾಲೂಕು ಐಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮ ನಿವಾಸಿ ಬಿ.ಪಿ.ಅನಿಲ್ ಕುಮಾರ್ ಅಲಿಯಾಸ್ ಸತೀಶ್ (40) ಎಂದು ಗುರುತಿಸಲಾಗಿದೆ.

j3tvkannada
ಸತೀಶ್ ಪಿಯುಸಿ ವ್ಯಾಸಂಗ ಮಾಡಿಕೊಂಡು ಮರದ ಆಚಾರಿಯಾಗಿ ಕೆಲಸ ಮಾಡುತ್ತಿದ್ದ. ಕಳೆದ 10 ವರ್ಷಗಳಿಂದ ಮದುವೆ ಮಾಡಿಕೊಳ್ಳಲು ವಧುವಿನ ಅನ್ವೇಷಣೆಯಲ್ಲಿದ್ದರಂತೆ, ಆದರೆ ಎಲ್ಲಿಯೂ ಹುಡುಗಿ ಸಿಕ್ಕಿರಲಿಲ್ಲವಂತೆ. ಕೆಲವು ಕಡೆ ಹುಡುಗಿ ನೋಡಿ ವಿವಾಹ ನಿಶ್ಚಿಯವಾಗುವ ಸಂದರ್ಭದಲ್ಲಿ ಕೆಲವು ಕಾರಣಗಳಿಂದ ವಿವಾಹ ಮುರಿದುಬೀಳುತಿತ್ತಂತೆ. ಮನೆಯಲ್ಲಿ ತನ್ನ ಅಣ್ಣ ಇದ್ದು ಅವರಿಗೂ ಕೂಡ ವಿವಾಹವಾಗಿಲ್ಲ.

j3tvkannada
ಅವರಿಗೂ ಹುಡುಗಿ ಹುಡುಕಿದ್ದರು ಸಿಕ್ಕಿರಲಿಲ್ಲ ಅವರಿಗೂ ವಯಸ್ಸಾದ ಕಾರಣ, ತಮ್ಮನಿಗಾದರೂ ವಿವಾಹ ಮಾಡೋಣ ಅಂತ ಪೋಷಕರು ಪ್ರಯತ್ನ ಪಟ್ಟರು ವಿವಾಹಕ್ಕೆ ಹುಡುಗಿ ಸಿಕ್ಕಲಿಲ್ಲವಂತೆ. ಸಂಬಂಧಿಕರು ಮತ್ತು ಸ್ನೇಹಿತರೂ ಜಿಲ್ಲೆ ಹಾಗೂ ಹೊರ ಜಿಲ್ಲೆಯಲ್ಲೂ ಹುಡುಕಿದರೂ ಫಲ ಸಿಕ್ಕಿರಲಿಲ್ಲವಂತೆ. ಕೆಲವು ದಿನಗಳು ಬೇಸರವಾಗಿ ಹುಡುಗಿ ನೋಡುವುದನ್ನು ನಿಲ್ಲಿಸಿದ್ದರಂತೆ.
ವಿವಾಹವಾಗದ ಕಾರಣಕ್ಕಾಗಿ ನೊಂದಿದ್ದ ಯುವಕ ಕೆಲವು ದಿನಗಳಿಂದ ಮನೆಯಲ್ಲಿ ಸೈಲೆಂಟ್ ಆಗಿ ಇರುತ್ತಿದ್ದನಂತೆ, ಯಾವುದೇ ಇತರೆ ಸಮಸ್ಯೆ ಇರಲಿಲ್ಲವಂತೆ, ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನಂತೆ. ಆದರೆ ರಾತ್ರಿ ಮನನೊಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.