
ತುಮಕೂರು:ನಿನ್ನೆ ಪೂಜೆ ಮಾಡಲು ರಾಮಾಂಜನೇಯ ದೇವಾಲಯಕ್ಕೆ ತೆರಳಿದ್ದ ಸ್ವಾಮಿನಾಥ್ ಎಂಬ ಯುವಕನನ್ನು ಮೇಲ್ಜಾತಿ ಸಮುದಾಯದವರು ದೇವಾಲಯದಿಂದ ಹೊರಕಳಿಸಿದ್ದಾರೆ.ನಾಡಿನಲ್ಲಿ ಅಸ್ಪೃಶ್ಯತೆ ಪಿಡುಗು ದೂರವಾಗಿಲ್ಲ. ತುಮಕೂರು ಜಿಲ್ಲೆಯಲ್ಲಿ ಜಾತಿ ಪದ್ಧತಿ ಇನ್ನೂ ಜೀವಂತವಾಗಿದ್ದು, ಇದಕ್ಕೆ ಮತ್ತೊಂದು ಉದಾಹರಣೆ ಸಾಕ್ಷಿಯಾಗಿದೆ. ಮಧುಗಿರಿ ತಾಲೂಕಿನ ಕವಣದಾಲ ಗ್ರಾಮದಲ್ಲಿ ದೇವಾಲಯ ಪ್ರವೇಶಿಸಲು ಬಿಡದೆ ದಲಿತ ಯುವಕನಿಗೆ ಗ್ರಾಮಸ್ಥರು ಅವಮಾನ ಮಾಡಿದ್ದಾರೆ.

j3tvkannada.in
ಮೇಲ್ಜಾತಿ ಅವರಿಂದ ಅವಮಾನ
ನಿನ್ನೆ ಪೂಜೆ ಮಾಡಲು ರಾಮಾಂಜನೇಯ ದೇವಾಲಯಕ್ಕೆ ತೆರಳಿದ್ದ ಸ್ವಾಮಿನಾಥ್ ಎಂಬ ಯುವಕನನ್ನು ಮೇಲ್ಜಾತಿ ಸಮುದಾಯದವರು ದೇವಾಲಯದಿಂದ ಹೊರ ಕಳಿಸಿದ್ದಾರೆ. ನಂತರ ಮೇಲ್ಜಾತಿ ಗ್ರಾಮಸ್ಥರು ಗುಂಪುಗೂಡಿಕೊಂಡು ಸ್ವಾಮಿನಾಥ್ ಅವರನ್ನು ಅವಮಾನಿಸಿದ್ದಾರೆ.
ದೂರು ಕೊಟ್ಟ ಸ್ವಾಮಿನಾಥ್
ದಲಿತರು ದೇವಾಲಯಕ್ಕೆ ಬರಬಾರದು ಎಂದು ಕಿರಿಕ್ ತೆಗೆದು, ದೇವಾಲಯ ಪ್ರವೇಶವನ್ನು ನಿರಾಕರಿಸಿರುವ ಈ ಘಟನೆಗೆ ಸಂಬಂಧಿಸಿದಂತೆ ಸ್ವಾಮಿನಾಥ್ ಅವರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಇಂದು ಮಧುಗಿರಿ ಎಸಿ ಮತ್ತು ತಹಶೀಲ್ದಾರ್ ಕೂಡ ಗ್ರಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಘಟನೆ ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.