
ಚಾಮರಾಜನಗರ:ಪಹಲ್ಗಾಮ್ ಉಗ್ರ ದಾಳಿ ಬಳಿಕ ಇದೀಗ ಭಾರತ ಪಾಕ್ ಯುದ್ದ ನಡೆಯುತ್ತಿದ್ದು, ಭಾರತದ ಸೇನೆ ಪಾಕಿಸ್ತಾನದ ಮೇಲೆ ಕೈಗೊಂಡಿರುವ ಆಪರೇಷನ್ ಸಿಂಧೂರ ಕಾರ್ಯಾಚಣೆಯನ್ನು ಮಾಡಿ ನಿವೃತ್ತ ಯೋಧರನ್ನು, ಅಧಿಕಾರಿಗಳನ್ನು ರೋಮಾಂಚನಕ್ಕೀಡು ಮಾಡಿದೆ ಎಂದು ಚಾಮರಾಜನಗರದ ಮಹಾದೇವ ಸ್ವಾಮಿ (Mahadeva Swamy, Ex Army Officer ) ಅವರು ಹೇಳಿದ್ದಾರೆ.

j3tvkannada.i
ಅವರು, ಸೇನೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದವರು. ಆಪರೇಷನ್ ಸಿಂಧೂರವನ್ನು ಜಾರಿಗೆ ತಂದು ಭಾರತ ಸರ್ಕಾರ ಬಹಳ ಉತ್ತಮ ಕೆಲಸ ಮಾಡಿದೆ, ಅಮಾಯಕ ಮಹಿಳೆಯರ ಸಿಂಧೂರವನ್ನು ಅಳಿಸುವ ನೀಚ ಮತ್ತು ಅವಹೇಳನಕಾರಿ ಕೆಲಸವನ್ನು ಪಾಕಿಸ್ತಾನ ಬೆಂಬಲಿತ ಉಗ್ರರು ಮಾಡಿದ್ದಾರೆ,
ಅವರಿಗೆ ತಕ್ಕ ಶಾಸ್ತಿಯಾಗಬೇಕಿತ್ತು, ಸೇನೆಗೆ 24 ವರ್ಷ ಸೇವೆಯನ್ನು ಸಲ್ಲಿಸಿರುವ ತನಗೆ ಪಾಕಿಸ್ತಾನದ ಕುಯುಕ್ತಿ ಚೆನ್ನಾಗಿ ಗೊತ್ತು, ಅದು ಮಂಡಿಯೂರುವವರೆಗೆ ಬಿಡಬಾರದು ಎಂದು ಹೇಳುತ್ತಾರೆ.