

ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದನ್ನೆಲ್ಲ ಗಮನಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಇದು ಜಯನಗರ ನಡೆಯುತ್ತಿರುವ ಘಟನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಇದು ಬೆಳಗ್ಗೆ 8 ಗಂಟೆಯಿಂದ ಕಂಡು ಬಂದ ದೃಶ್ಯ. ಆಸ್ಪತ್ರೆಯ ಡೇಟಾ ಆಪರೇಟರ್ ಸಿಬ್ಬಂದಿಗೆ ಕಳೆದ 4 ತಿಂಗಳಿಂದ ಸಂಬಳ ಸಿಗದ ಕಾರಣ ಇವತ್ತಿನಿಂದ ಮುಷ್ಕರಕ್ಕೆ ಕೂತಿದ್ದು, ಹೊರ ರೋಗಿಗಳಿಗೆ ಟೋಕನ್ ವಿತರಿಸುವ ವಿಭಾಗದಲ್ಲಿ ಯಾರೂ ಇಲ್ಲ.
ರೋಗಿಗಳು ಮತ್ತು ಅವರೊಂದಿಗೆ ಬಂದ ಸಹಾಯಕರು ಗಲಾಟೆ ಮಾಡಿದ ಬಳಿಕ, ಆ ವಿಭಾಗದಲ್ಲಿ ಹೊಸಬರನ್ನು ತಂದು ಕೂರಿಸಲಾಗಿದೆ. ಆದರೆ ಅವರಿಂದ ಬೇಗ ಬೇಗ ಚೀಟಿಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಗಂಟೆಗಳಿಂದ ಸರತಿ ಸಾಲಲ್ಲಿ ನಿಂತವರು ಆಸ್ಪತ್ರೆ ಸಿಬ್ಬಂದಿ ಮೇಲೆ ಕೋಪ ಹೊರ ಹಾಕುತ್ತಿದ್ದಾರೆ. ಆಸ್ಪತ್ರೆಗೆ ಸಾಲು ಸಾಲು ರೋಗಿಗಳು ಬರುತ್ತಿದ್ದರೂ ಕೆಲಸಕ್ಕೆ ಇಟ್ಟುಕೊಂಡವರಿಗೆ ಸಂಬಳ ಕೊಡಲು ಏನು ತೊಂದರೆ ಇವರುಗಳಿಗೆ? ಕಾಯಿಲೆಗಾಗಿ ಜನ ಆಸ್ಪತ್ರೆಗೆ ಹೋದರೆ ಗಂಟೆಗಟ್ಟಲೆ ಕಾಯಿಸಿ ರೋಗಿಗಳನ್ನು ಹೈರಾಣಾಗಿಸುತ್ತಾರೆ ಯಾಕೆ? ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.