
ಉಡುಪಿ: ಭಾರತೀಯರೆಲ್ಲರ ಇಚ್ಛೆ, ಆಸೆ, ಆಕಾಂಕ್ಷೆ ಒಂದೇ. ಅಮಾಯಕ ಭಾರತೀಯರನ್ನು ಕೊಲ್ಲುತ್ತಿರುವ ಉಗ್ರರನ್ನು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನವನ್ನು ಬಗ್ಗು ಬಡಿಯಬೇಕು. ಸೇನೆ ಹೊರತು ಬೇರೆ ಯಾರೂ ಯುದ್ಧಕ್ಕೆ ಹೋಗಲಾಗದು. ಅದರೆ ನಮ್ಮ ಸೈನಿಕರ ಬಲಕ್ಕಾಗಿ, ಅವರ ಕ್ಷೇಮಕ್ಕಾಗಿ ಪೂಜೆ, ಪ್ರಾರ್ಥನೆಗಳನ್ನು ಮಾಡಬಹುದು.

j3tvkannada
ಉಡುಪಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ಕೈಯಲ್ಲಿ ಸುದರ್ಶನ ಚಕ್ರ ಹಿಡಿದ ಕೃಷ್ಣ ಪರಮಾತ್ಮನಿಗೆ ಅರ್ಚಕರಿಂದ ವಿಶೇಷ ಪೂಜೆ. ಪರ್ಯಾಯ ಶ್ರೀ ಮತ್ತು ಪುತ್ತಿಗೆ ಶ್ರೀಗಳಿಂದ ಉಡುಪಿ ಕೃಷ್ಣನಿಗೆ ವಿಶೇಷ ಅಲಂಕಾರ. ಚಕ್ರಪಾಣಿ ಕೃಷ್ಣ ಅಲಂಕಾರ ದುಷ್ಟಶಕ್ತಿಗಳ ಸಂಹಾರದ ಸಂಕೇತ ಎನ್ನಲಾಗುತ್ತಿದೆ. ನಿನ್ನೆ ಭಾರತೀಯ ಸೇನೆ ಎಸ್- 400 ಸುದರ್ಶನ ಚಕ್ರ ಏರ್ ಡಿಫೆನ್ಸ್ ಸಾಧನ ಬಳಸಿ ಪಾಕಿಸ್ತಾನ ಫೈರ್ ಮಾಡಿದ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಿದ್ದು ಕಾಕತಾಳೀಯವಾಗಿರಲಾರದು!