
ವಿಜಯಪುರ: ಸುಪ್ರಿಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶದಂತೆ ನ್ಯಾ.ನಾಗಮೋಹನ ದಾಸ್ ಆಯೋಗವು ಒಳ ಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಯೊಳಗಿನ ಎಲ್ಲ ಜಾತಿಗಳ ನಿಖರ ದತ್ತಾಂಶ ಸಂಗ್ರಹಣ ಕಾರ್ಯ ಮೇ5 ರಿಂದ 17ರವರೆಗೆ ಪ್ರಥಮ ಹಂತದಲ್ಲಿ ಗಣತಿದಾರರು ಮನೆ, ಮನೆಗೆ ತೆರಳಿ ಸಮೀಕ್ಷಾ ಕಾರ್ಯ ಕೈಗೊಳ್ಳುತ್ತಾರೆ.

j3tvkannada
ದ್ವಿತೀಯ ಹಂತ ಮೇ 19 ರಿಂದ 21 ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರ ಸಮೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಮಾದಿಗ ಸಮುದಾಯದವರು ಮಾದಿಗ ಎಂದು ಬರೆಸಬೇಕು ಎಂದು ಮಾದಿಗ ದಂಡೋರ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸಾಯಬಣ್ಣ ಪುರದಾಳ ಮನವಿ ಮಾಡಿದರು.
ತಾಲ್ಲೂಕಿನಲ್ಲಿರುವ ಮಾದಿಗ ಸಮುದಾಯದದವರು ತಮ್ಮ ಜಾತಿ ಆದಿ ಆಂಧ್ರ (ಎ.ಎ) ಆದಿ ಕರ್ನಾಟಕ (ಎ.ಕೆ), ಆದಿ ದ್ರಾವಿಡ (ಎ.ಡಿ), ಮಾಂಗ, ಮಾದರ ಅಥವಾ ಬೇರೇನೆ ಇರಲಿ ಜಾತಿ ಕಾಲಂ 61ರಲ್ಲಿ ನಿಗದಿಯಾಗಿರುವ ಮಾದಿಗ ಎಂದು ಕಡ್ಡಾಯವಾಗಿ ಬರೆಯಿಸಬೇಕು ಎಂದು ತಿಳಿಸಿದರು.
ನಿರಂತರ 35 ವರ್ಷಗಳ ಒಳಮೀಸಲಾತಿ ಹೋರಾಟ ಈಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಸರ್ಕಾರ ನಡೆಸುತ್ತಿರುವ ಜಾತಿಗಳ ಸಮೀಕ್ಷೆಯಲ್ಲಿ ಸಮುದಾಯಗಳು ತುಂಬಾ ಜಾಗೃತೆಯಿಂದ ಮಾಹಿತಿಯನ್ನು ದಾಖಲಿಸಬೇಕು ಎಂದು ಸಾಯಬಣ್ಣ ಎಚ್ಚರಿಸಿದ್ದಾರೆ.