
ತುಮಕೂರು: ಕಡಬ ಹೋಬಳಿ ಯಡವನಳ್ಳಿ ಮಜರೆ ಕಡೆಕೋಡಿಪಾಳ್ಯ ಗ್ರಾಮದಲ್ಲಿ ಹನುಮಂತ ದೇವರು ಹಾಗೂ ತಿರುಮಲೇಶ್ವರಸ್ವಾಮಿ ನೂತನ ಶಿಲಾ ದೇಗುಲ, ಶಿಲಾಬಿಂಬ, ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿದರು.

j3tvkannada
ರಾಜ್ಯ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ಜನಗಣತಿ ಮಾಡಲು ಹೊರಟಿದ್ದು ದುರಾದೃಷ್ಟಕರ. ಇದನ್ನು ಅರಿತ ಕೇಂದ್ರ ಸರ್ಕಾರವು ದೇಶದ ಸರ್ವಜನರ ಹಿತಕ್ಕೆ ಅನುಕೂಲ ವಾಗುವಂತೆ ಜಾತಿಗಣತಿ ಮಾಡಲು ಮುಂದಾಗಿದೆ ಎಂದು ಹೇಳಿದರು.
ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ ದಶಕಗಳ ಹಿಂದೆ ಮಾಡಿದ್ದ ಜಾತಿಗಣತಿಯನ್ನೇ ರಾಜ್ಯ ಸರ್ಕಾರವು ಜಾರಿಗೊಳಿಸಲು ಹೊರಟಿತ್ತು. ಇದು ಅವೈಜ್ಞಾನಿಕವಾಗಿದ್ದರಿಂದ ಎಲ್ಲರ ವಿರೋಧಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರ ಹೊಸದಾಗಿ ಜನಗಣತಿ ಮಾಡಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ. ಎಲ್ಲಾ ಶೋಷಿತ ಸಮುದಾಯಗಳನ್ನು ಜಾತಿಗಣತಿಯಲ್ಲಿ ಗುರುತಿಸುವಂತೆ ಆಗಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯವನ್ನು ಒದಗಿಸಲು ಸಾಧ್ಯ ಎಂದರು.
ನಿವೃತ್ತ ಐ.ಎ.ಎಸ್ ಅಧಿಕಾರಿ ಎಸ್. ದಯಾಶಂಕರ್ ಹಾಗೂ ಎಸ್.ಡಿ. ದಿಲೀಪ್ ಕುಮಾರ್, ಚಂದ್ರಶೇಖರ್ ಬಾಬು, ಕಳ್ಳಿಪಾಳ್ಯ ಲೋಕೇಶ್, ಜಿ.ಎನ್. ಬೆಟ್ಟಸ್ವಾಮಿ, ಪಿ.ಡಿ.ಒ ಮಂಜುಳ ಪಾಟೀಲ್, ಗ್ರಾ.ಪಂ ಅಧ್ಯಕ್ಷೆ ಕಲಾವತಿ, ಗ್ರಾ.ಪಂ. ಸದಸ್ಯರಾದ ದಯಾನಂದ್, ಭದ್ರಮ್ಮ, ಬಾಲಾಜಿ ಹಾಜರಿದ್ದರು.