
ರಾಯಚೂರು: ಅಭಿಲಾಷ್ ನೇತೃತ್ವದಲ್ಲಿ ಮೈಸೂರಿನ ವಿಶ್ವ ದಾಖಲೆ ಕಲಾವಿದ ಪುನೀತಕುಮಾರ ಹಾಗೂ ರಂಗೋಲಿ ಕಲಾವಿದೆ ಲಕ್ಷ್ಮಿ ಸಿ. ಅವರ ಕಲಾವಿದ ತಂಡ ಅಕ್ಷಯ ತೃತೀಯ ದಿನ ಮಂತ್ರಾಲಯ ಮಠದ ಆವರಣದಲ್ಲಿ ಬೃಹತ್ ರಂಗೋಲಿ ಬಿಡಿಸಿ ಗಮನ ಸೆಳೆದರು.

j3tvkannada
41,346 ಚದರ ಅಡಿ ಜಾಗದಲ್ಲಿ ರಂಗೋಲಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಅವರ ಭಾವಚಿತ್ರ ಅರಳಿಸಿದ್ದಾರೆ.ಇದಕ್ಕೆ 3 ಸಾವಿರ ಕೆಜಿ ರಂಗೋಲಿ ಬಳಸಿದ್ದಾರೆ.
ಪುನೀತ್, ಲಕ್ಷ್ಮಿ ಸಿಮ ಆದಿತ್ಯ ಪಿ, ಸಂಪ್ರೀತ, ಸಂಜಯ ಎಸ್. ರವಿಚಂದ್ರನ್ ರಾಘವ್ ಆಡಳಿಕಟ್ಟಿ, ಮಂಜುನಾಥ ರಂಗೋಲಿ ಬಿಡಿಸಿದರು. ಅವರಿಗೆ ಕುಮಾರ ಸ್ವಾಮಿ, ಅರವಿಂದ, ಗಿರಿಶ ಮಧು ಹಾಗೂ ರಾಜು ನೆರವಾದರು.