
ಮಂಡ್ಯ: ಕರ್ನಾಟಕ ಸರ್ಕಾರ ಮೇ 12ರಂದು ಗೌತಮ ಬುದ್ಧರ ಜಯಂತಿ ಆಚರಿಸುತ್ತಿದ್ದು, ರಜೆಯನ್ನು ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಅಂಬೇಡ್ಕರ್ ವಾರಿಯರ್ಸ್ ರಾಜ್ಯ ಘಟಕದ ಅಧ್ಯಕ್ಷ ಗಂಗರಾಜು ಮನವಿ ಮಾಡಿದರು.

j3tvkannada
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಹಲವು ಜಯಂತಿಗಳನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತಿದ್ದು, ಬೌದ್ಧ ಧರ್ಮವೂ ರಾಷ್ಟ್ರದಲ್ಲಿಯೇ ಸೃಷ್ಟಿಯಾದ ಧರ್ಮವಾಗಿದೆ. ಜಯಂತಿ ಆಚರಣೆ ಮಾಡುವ ಸರ್ಕಾರ ರಜೆ ಘೋಷಣೆ ಮಾಡದಿರುವುದು ನಿರಾಸೆ ಉಂಟು ಮಾಡಿದೆ ಎಂದರು.
ನಾಡಗೀತೆಯಲ್ಲಿ ಬುದ್ಧರ ಹೆಸರನ್ನು ಸೇರಿಸಬೇಕು. ಬೌದ್ಧ ಧಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ₹1 ಸಾವಿರ ಕೋಟಿ ಅನುದಾನ ನೀಡಬೇಕು. ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಮಹಾರಾಷ್ಟ್ರ ರಾಜ್ಯದ ಮಾದರಿ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಯಥಾಸ್ಥಿತಿಯಲ್ಲಿ ಮುಂದುವರಿಸಲು ಕ್ರಮ ವಹಿಸಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಬುದ್ಧ ಭಾರತ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ಪ್ರಧಾನ ಕಾರ್ಯದರ್ಶಿ ಮೋಹನ್ಕುಮಾರ್ ಎಸ್, ನರಸಿಂಹಮೂರ್ತಿ, ಎಂ.ಬಿ. ನಾಗಣ್ಣಗೌಡ, ಪ್ರಸನ್ನ, ನಿರಂಜನ್ ಬೌದ್ಧ, ಲೋಕೇಶ್ ಇದ್ದರು.