
ಬೀದರ್: ಲಘು ಉದ್ಯೋಗ ಭಾರತಿ ಸಂಘಟನೆಯ ಸ್ಥಾಪನೆ ದಿನದ ನಿಮಿತ್ತ ಬೀದರ್ ತಾಲ್ಲೂಕಿನ ಮಂದಕನಳ್ಳಿಯಲ್ಲಿ ನಡೆದ ಶಿಬಿರದಲ್ಲಿ ರೈತರು, ಸಾರ್ವಜನಿಕರು ಸೇರಿ 200 ಮಂದಿಯ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಡಾ.ಪೂಜಾ ಶಿಂಧೆ, ಡಾ.ಶೈಲೇಶ್ ದಾಬಕೆ, ಡಾ.ಶೈಲೇಶ್ ಮಠ, ಡಾ.ಸಂಗಮೇಶ ವಡಗಾವೆ, ಬ್ರಿಮ್ಸ್ ವೈದ್ಯ ವಿದ್ಯಾರ್ಥಿಗಳಾದ ಅನಿಲಕುಮಾರ ಸಜ್ಜನ, ಆರ್ಯನ್ ಕಲ್ಲೂರಕರ, ಅನ್ನಪೂರ್ಣ, ಅರುಣಕುಮಾರ ಪಾಟೀಲ ಹಾಗೂ ಮೋಹಿನಿ ಅವರು ಸಾಮಾನ್ಯ ರೋಗ, ನೇತ್ರ, ದಂತ ಹಾಗೂ ನರರೋಗಗಳ ತಪಾಸಣೆ ನಡೆಸಿದರು. ಅವಶ್ಯಕತೆ ಇರುವವರಿಗೆ ಉಚಿತ ಔಷಧ ವಿತರಿಸಿದರು.

j3tvkannada
ಲಘು ಉದ್ಯೋಗ ಭಾರತಿ ಬೀದರ್ ಘಟಕದ ಅಧ್ಯಕ್ಷ ಸಚ್ಚಿದಾನಂದ ಚಿದ್ರೆ ಮಾತನಾಡಿ, ಲಘು ಉದ್ಯೋಗ ಭಾರತಿ ಸಂಘಟನೆಯು ದೇಶದಲ್ಲಿ 53 ಸಾವಿರ ಮೈಕ್ರೋ ಸ್ಮಾಲ್, ಮ್ಯಾಕ್ರೋ ಎಂಟಿಸೆಸ್ ಸದಸ್ಯರು ಹಾಗೂ 500ಕ್ಕೂ ಹೆಚ್ಚು ಘಟಕಗಳನ್ನು ಹೊಂದಿದೆ. ಲಘು ಉದ್ಯಮಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹನುಮಂತರಾವ ಪಾಟೀಲ ಉದ್ಘಾಟಿಸಿದರು. ಬೀದರ್ ಹಾರ್ಟಿಕಲ್ಟರ್ ಫಾರ್ಮಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಅಧ್ಯಕ್ಷ ಚೇತನ ದಾಬಕೆ, ಪ್ರಮುಖರಾದ ಮಂಜುನಾಥ ಹೂಗಾರ, ರಾಘವೇಂದ್ರ ಪಾಟೀಲ, ನರಸಿಂಗ್ ಸಿಂಧೆ, ನಿಖಿಲ್, ಗಂಗಶೆಟ್ಟಿ, ಮಹೇಶ ಚಿಮಕೋಡೆ, ವೀರೇಶ ಪಾಟೀಲ ಹಾಜರಿದ್ದರು. ಲಘು ಉದ್ಯೋಗ ಭಾರತಿ ಬೀದರ್ ಘಟಕ ಹಾಗೂ ಬೀದರ್ ಹಾರ್ಟಿಕಲ್ಬರ್ ಫಾರ್ಮಸ್ ಪ್ರೊಡ್ಯೂಸರ್ ಕಂಪನಿ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.