ಕಲಬುರಗಿ: ಮಾ.4 ರಂದು ನಗರದ ಕಾಕಡೆ ಚೌಕ್ನ ಲಂಗರ ಹನುಮಾನ ಮಂದಿರ ಸಮೀಪದ ಜಾಗದಲ್ಲಿ ವೀರೇಶ್ನಿಗೆ ಮದ್ಯ ಕುಡಿಸಿ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ವೀರೇಶ್ ತಾಯಿ ಮಲ್ಲಮ್ಮ ಶ್ರೀಕಾಂತ ಬಿರಾದಾರ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ಅವರು ಡಿ.ಸಿ.ಪಿ.ಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ, ಸಬ್-ಅರ್ಬನ್ ಉಪ ವಿಭಾಗದ ಎ.ಸಿ.ಪಿ.ಡಿ.ಜಿ.ರಾಣ ಅವರ ಮಾರ್ಗ ದರ್ಶನದಲ್ಲಿ ಸಬ್-ಅರ್ಬನ್ ಪೊಲೀಸ್ ಠಾಣೆ ಪಿ.ಐ ಸಂತೋಷ ಎಲ್. ತಟ್ಟೆಪಳ್ಳಿ ಅವರ ನೇತೃತ್ವದಲ್ಲಿ ಪಿ.ಎಸ್.ಐ ಬಸವರಾಜು, ಸಿಬ್ಬಂದಿಗಳಾದ ಮಂಜುನಾಥ, ಫಿರೋಜ್, ಶಶಿಕಾಂತ, ಪ್ರಶಾಂತ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು.

ಭವಾನಿ ನಗರದ ಶಿವಾನಂದ ಅಲಿಯಾಸ್ ಶಿವು ತಂದೆ ಗುರುಲಿಂಗಪ್ಪ ಕುಂಬಾರ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವೀರೇಶ್ ವಿನಾಕಾರಣ 50 ಸಾವಿರ ರೂಪಾಯಿ ಹಣ ಕೊಡುವಂತೆ ಪೀಡಿಸುತ್ತಿದ್ದ ಈ ಕಾರಣಕ್ಕಾಗಿ ಆತನ ಕೊಲೆ ಮಾಡಿರುವುದಾಗಿ ಆರೋಪಿ ಶಿವಾನಂದ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ತಂಡ ತನಿಖೆ ನಡೆಸಿ 24 ಗಂಟೆಯಲ್ಲಿ ಕೊಲೆ ಆರೋಪಿ ಶಿವಾನಂದ ಕುಂಬಾರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. 24 ಗಂಟೆಯಲ್ಲಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ. ಅವರು ಶ್ಲಾಘಿಸಿದ್ದಾರೆ.