
ವಿಜಯನಗರ: ಗುಳೇ ಲಕ್ಕಮ್ಮದೇವಿ ಜಾತ್ರೆ ಅಂಗವಾಗಿ ಜಾತ್ರೆ ದಿನ ಊರಿಗೆ ಊರೇ ಮನೆ ಬಿಟ್ಟು ಊರಿನ ಹೊರಗೆ ಹೋಗುತ್ತಾರೆ. ಹಲವು ವರ್ಷಗಳಿಂದ ಗ್ರಾಮದಲ್ಲಿ ಈ ಆಚರಣೆ ಪಾಲಿಸಲಾಗುತ್ತಿದೆ.

j3tvkannada
ಗ್ರಾಮಸ್ಥರು ಮಂಗಳವಾರ ರಾತ್ರಿ ಊರಮ್ಮ ಬಯಲಿನಲ್ಲಿನ ಕಟ್ಟೆಯ ಮೇಲೆ ದೇವಿಯನ್ನು ಪ್ರತಿಷ್ಟಾಪಿಸಿ, ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆವರೆಗೂ ಊರಿನ ಹೊರಗೆ ಇರುತ್ತಾರೆ. ನಂತರ ಊರಮ್ಮ ದೇವಿಯು ದ್ವಾರಬಾಗಿಲು ಮೂಲಕ ಊರ ಹೊರಗೆ ಹೋಗುವಾಗ ಊರಿನ ಆಯಾಗಾರರ ಮನೆಯವರು ದೇವಿ ಜತೆಗೆ ತಮಗೆ ಬೇಕಾದ ಸಾಮಾನುಗಳನ್ನು ಬುಟ್ಟಿಯಲ್ಲಿ ಕಟ್ಟಿಕೊಂಡು, ಅದನ್ನು ತಲೆಯ ಮೇಲೆ ಹೊತ್ತುಕೊಂಡು ಹೊಗುತ್ತಾರೆ. ನಂತರ ಊರಿನ ಬಾಗಿಲಿಗೆ ಬೇಲಿ ಹಾಕಲಾಗುತ್ತದೆ.
ಗೋವಿಂದಗಿರಿ ಸಮೀಪದ ಆಲದ ಮರದ ಕೆಳಗಿನ ದೇವಸ್ಥಾನದಲ್ಲಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ವೇಳೆ ಗೋವಿಂದಗಿರಿಯ ಗ್ರಾಮದ ಜನತೆ ಬಂದು ಹರಕೆ ಸಲ್ಲಿಸುತ್ತಾರೆ. ಸಂಜೆ ಬಳಿಕ ಊರು ಬಿಟ್ಟ ಹೋದ ಜನರು ದೇವಿಯನ್ನು ಪಟ್ಟಣಕ್ಕೆ ಕರೆ ತರುತ್ತಾರೆ. ಈ ವೇಳೆ ಪಟ್ಟಣದ ಊರ ಬಾಗಿಲ ಬಳಿ ಹಾಕಿರುವ ಬೆಂಕಿಯನ್ನು ಮನೆಗೆ ತೆಗೆದುಕೊಂಡು ಹೋಗಿ ದೀಪ ಬೆಳಗಿಸುವ ಮೂಲಕ ಜಾತ್ರೆ ಸಂಪನ್ನವಾಗುತ್ತದೆ.