
ಯಾದಗಿರಿ: ತಾಲ್ಲೂಕು ವ್ಯಾಪ್ತಿಯಲ್ಲಿ ಬಹಳಷ್ಟು ರೈತರು ಕಲ್ಲಂಗಡಿ ಬೆಳೆದಿರುವುದರಿಂದ ಇಳುವರಿ ಹೆಚ್ಚಾಗಿ ಬೆಲೆ ಕಡಿಮೆಯಾಗಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಯಲು ₹50 ಸಾವಿರದಿಂದ ₹60 ಖರ್ಚು ಬರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಲ್ಲಂಗಡಿ ಇಳುವರಿ ಹೆಚ್ಚಾಗಿದೆ. ಬಹಳಷ್ಟು ರೈತರು ಕಲ್ಲಂಗಡಿ ಬೆಳೆದಿರುವುದು, ಮಾರುಕಟ್ಟೆ ಇಲ್ಲದಿರುವುದು, ಒಂದು ಎಕರೆಯಲ್ಲಿ ಸುಮಾರು 300 ಕ್ವಿಂಟಾಲ್ ಇಳುವರಿ ಬಂದಿರುವುದರಿಂದ ಬೆಲೆ ಕಡಿಮೆಯಾಗಿದೆ ಎಂದು ರೈತರು ಹೇಳುತ್ತಾರೆ.

j3tvkannada
ತಮ್ಮ ಜಮೀನುಗಳಲ್ಲಿ ಬೆಳೆದ ಕಲ್ಲಂಗಡಿಯನ್ನು ಪಿಕಪ್ ವಾಹನದಲ್ಲಿ ತುಂಬಿಕೊಂಡು ಊರೂರು ಅಲೆದು ಮಾರಾಟ ಮಾಡುತ್ತಿದ್ದಾರೆ. ಒಂದಕ್ಕೆ ₹10-₹20ನಂತೆ ಮಾರಾಟ ಮಾಡುತ್ತಿದ್ದಾರೆ. ಗ್ರಾತ್ರಕ್ಕೆ ತಕ್ಕಂತೆ ಜೋಡಿಗೆ ₹50 ರಂತೆಯೂ ವ್ಯಾಪಾರ ಮಾಡುತ್ತಾರೆ. ಬೆಲೆ ಕಡಿಮೆ ಇದ್ದರೂ ಗ್ರಾಹಕರು ಕಲ್ಲಂಗಡಿ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕಳೆದ ವರ್ಷ ಇದೇ ಏಪ್ರಿಲ್ ತಿಂಗಳಲ್ಲಿ ಒಂದು ಕಲ್ಲಂಗಡಿಯ ಸುಮಾರು 50 ರಿಂದ 60 ರೂಗಳಿಗೆ ಮಾರಾಟವಾಗಿವೆ. ಕಳೆದ ವರ್ಷ ಕಲ್ಲಂಗಡಿ ಬೆಳೆಯಿಂದ ಲಾಭವಾಗಿತ್ತು ಈ ವರ್ಷ ಕಲ್ಲಂಗಡಿ ಬೆಳೆಯಿಂದ ನಷ್ಟವಾಗಿದೆ ಎಂದು ಕಲ್ಲಂಗಡಿ ಬೆಳೆದ ರೈತರು ಹೇಳುತ್ತಾರೆ.