
ತುಮಕೂರು: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ತಾಲ್ಲೂಕಿನ ಮುಸ್ಲಿಮರು ಸೋಮವಾರ ಬೃಹತ್ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ತಿಳಿಸಿದರು.

j3tvkannada
ಪಟ್ಟಣದಲ್ಲಿ ಗುರುವಾರ ಮುಸ್ಲಿಂ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಹಲವು ಸಂಘಟನೆಗಳು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕಿದೆ. ಪರವಾಗಿ ಬಂದರೆ ಗೌರವಿಸಬೇಕಾಗುತ್ತದೆ, ವಿರೋಧವಾಗಿ ಬಂದರೆ ಶಾಂತಿ, ಸೌಹಾರ್ಧದಿಂದ ನಮ್ಮ ನಿಲುವು ಪ್ರದರ್ಶಿಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ರೆಹಮಾನ್ ಷರೀಫ್, ಸದಾಖತ್, ಸೆಮ್ಮಿಉಲ್ಲಾ, ಇಮ್ರಾನ್ ಖಾನ್, ಸಾದಿಕ್, ತನ್ನೀರ್, ಸನಾವುಲ್ಲಾ, ಮೊಹಿಬುಲ್ಲಾ ಖಾನ್, ಏಜಾಸ್ ಪಾಷಾ ಅವರು ಸಂಘಟಿತ ಹೋರಾಟಕ್ಕೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಪುರಸಭೆ ಮಾಜಿ ಅಧ್ಯಕ್ಷೆ ಆಯಿಷಾ ಬೀ, ಸದಸ್ಯರಾದ ಅಸ್ಮಾ, ತಬಸುಮ್ ಹಾಗೂ ಸಲ್ಮಾನ್, ಜಬೀಉಲ್ಲಾ ಮುಂತಾದವರು ಹಾಜರಿದ್ದರು.