
ಕೊಪ್ಪಳ : ಸಿ. ಎಮ್ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಬದಲಾವಣೆ ಆಗಲ್ಲ. ಸಿದ್ದರಾಮಯ್ಯನವರೇ ಮುಂದಿನ ಮೂರು ವರ್ಷಗಳ ಕಾಲ ಇರ್ತಾರೆ ಎಂದು ಸಿ.ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ಡಿಕೆ ಶಿವಕುಮಾರ್ ಯಾಕೆ ಸಿ.ಎಂ ಆಗಬಾರದು ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ನನ್ನ ಪ್ರಕಾರ ಸಿ.ಎಂ ಸಿದ್ದರಾಮಯ್ಯ ಇನ್ನು ಮೂರು ವರ್ಷ ಇರ್ತಾರೆ. ಸಿದ್ದರಾಮಯ್ಯ ಅವರಿಗೆ ಬದ್ದತೆ ಇದೆ. ಶಿವಕುಮಾರ್ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದರು.
ಇದೇ ವೇಳೆ ಮುಸ್ಲಿಮರ ಮದುವೆ ವಿಚಾರವಾಗಿ ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದು. ಮುಸ್ಲಿಮರ ಮದುವೆ ಕಾಂಟ್ರ್ಯಾಕ್ಟ್ ಮ್ಯಾರೇಜ್. ಹಿಂದೂಗಳ ತರಹ ಏಳು ಜನ್ಮದ ಅನುಬಂಧ ಅಲ್ಲ ಎಂದರು. ವಕ್ಫ್ ಬಿಲ್ ಸರಿಯಾಗಿ ಇಲ್ಲ ಅನಿಸ್ತಾ ಇದೆ. ಮುಸ್ಲಿಮ್ ಹಕ್ಕುಗಳನ್ನು ಧ್ವಂಸ ಮಾಡಲು ಹೊರಟಂತಿದೆ. ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ಬಿಲ್ ವಿರುದ್ದ ನಾಳೆ ದೇಶದಲ್ಲಿ ಅಶಾಂತಿ ಉಂಟಾಗಬಹುದು.
ದೇಶದಲ್ಲಿ ಮುಸ್ಲಿಂರ ಸ್ಥಿತಿ ಹೀನಾಯವಾಗಿದ, ಮೋದಿ ತಿಳಿದು ಮಾತಾಡ್ತಾರೋ ತಿಳಿಯದೆ ಮಾತಾಡ್ತಾರೋ ಗೊತ್ತಿಲ್ಲ. ದೇಶದಲ್ಲಿ 20 ಕೋಟಿ ಮೇಲೆ ಮುಸ್ಲಿಮ್ ಜನ ಇದಾರೆ. ಅವರ ಸ್ಥಿತಿ ಹೀನಾಯವಾಗಿದ್ದು, ಶಿಕ್ಷಣ ಕೇಳಲೇಬೇಡಿ. ತುಂಬಾ ಬಡವರು ಇದ್ದಾರೆ,ಅವರಿಗೆ ಕೊಟ್ಟರೇ ತಪ್ಪೇನು ಎಂದರು. ರಾಜ್ಯದಲ್ಲಿ ಈಗ ಮಂಡನೆಯಾಗುತ್ತಿರುವುದು ಇದು ಜಾತಿ ಗಣತಿ ಅಲ್ಲ. ಅದು ಸಾಮಾಜಿಕ ಶೈಕ್ಷಣಿಕ ಆರ್ಥಿಕ ವಿಚಾರ ತಿಳಿಯಲು ಮಾಡಿದ ಸರ್ವೆ. ಅದರಲ್ಲಿ ಜಾತಿ ಕಾಲಂ ಸೇರಿಸಲಾಗಿದೆ. ಇದು ಸ್ವಾಗತಾರ್ಹ. ಇದು ಅತ್ಯಂತ ವೈಜ್ಞಾನಿಕವಾಗಿದೆ ಎಂದರು.

j3tvkannada
ಶಿಕ್ಷಕರು ಮನೆ ಮನೆಗೆ ಹೋಗಿ ಗಣತಿ ಮಾಡಿದ್ದಾರೆ. ಆದ್ರೆ 100 ಪರ್ಸೆಂಟ್ ಸರಿ ಇದೆಯೋ ಇಲ್ವೋ ಅನ್ನೋ ಚರ್ಚೆಯಾಗಿದೆ. 96-97 ಪರ್ಸೆಂಟ್ ಜನಗಣತಿ ಸರಿಯಾಗಿದೆ. ಇದರ ಅವಶ್ಯಕತೆ ಇತ್ತು. ಒಂದು ವರ್ಷದ ಹಿಂದೆಯೆ ಬಿಡುಗಡೆ ಆಗಬೇಕಿತ್ತು.ಇದೀಗ ಕೇವಲ ಮಂತ್ರಿಗಳ ಬಳಿ ಇದೆ,ಎಲ್ಲರೂ ಅದನ್ನು ಓದಬೇಕು ಲಿಂಗಾಯತರು, ಒಕ್ಕಲಿಗರು ಅಂಕಿ ಸಂಖ್ಯೆ ಕೇವಲ ಊಹಾಪೋಹ. ಅದರ ಬಗ್ಗೆ ಕಾಮೆಂಟ್ ಮಾಡೋದು ಸರಿ ಅಲ್ಲ. 17 ಕ್ಯಾಬಿನೆಟ್ ನಲ್ಲಿ ತರಲಾಗ್ತಿದೆ. ಇದನ್ನು ಯಾವ ಜಾತಿ ಧರ್ಮದವರು ವಿರೋಧ ಮಾಡಬಾರದು. ಬಿ.ಜೆ.ಪಿಯವರು ಸುಮ್ನೆ ವಿರೋಧ ಮಾಡ್ತಾರೆ. ಇದ್ಯಾಕೆ ಮರಣ ಶಾಸನ ಆಗತ್ತೆ. ಇದನ್ನು ಇಂಪ್ಲಿಮೆಂಟ್ ಮಾಡಿದ್ರೆ ಸಿದ್ದರಾಮಯ್ಯ ಘನತೆ ಹೆಚ್ಚಾಗತ್ತೆ ಎಂದರು.
ಕೆಲವರು ಲಿಂಗಾಯತರ ಜನಸಂಖ್ಯೆ ಕಡಿಮೆಯಾಗಿದೆ ಅಂತಾರೆ. ಒಂದು ಕೋಟಿ ಜನ ಸಂಖ್ಯೆ ಅಂತಾ MB ಪಾಟೀಲ್ ಹೇಳಿರೋದು ಸರಿಯಾಗಿದೆ. ಶಂಕರ್ ಬಿದರಿ ಅವರ ಜೊತೆಗೆ ನಾನು ಮಾತಾಡಿದ್ದೇನೆ ವಿರೋಧ ಮಾಡಬೇಡಿ ಸ್ವಾಗತ ಮಾಡಿ ಎಂದು ಹೇಳಿದ್ದೇನೆ. ಲಿಂಗಾಯತ ಶಾಸಕರು,ವಿದ್ಯಾವಂತರು,ಲಿಂಗಾಯತ ಮುಖಂಡರ ಜೊತೆ ಚರ್ಚೆ ಮಾಡಿ. ಕೇವಲ ಎರಡು ಮೂರು ಪರ್ಸೆಂಟ್ ಇರುವ ಬ್ರಾಹ್ಮಣ ಸಮದಾಯ ಕಂಟ್ರೋಲ್ ಮಾಡಲ್ವಾ? ಅವರು ವಿದ್ಯಾವಂತರು. ಬ್ರಾಹ್ಮಣ,ಜೈನರು ಬಿಟ್ಟು ಬೇರೆ ಎಲ್ಲರೂ ಹಿಂದುಳಿದವರೇ. ಮುಸ್ಲಿಮರನ್ನ ಹಿಂದುಳಿದ ವರ್ಗಕ್ಕೆ ತರಲಾಗಿದೆ. ಇದು ಬಿಜೆಪಿಯವರಿಗೆ ಅರ್ಥ ಆಗಲ್ಲ. ಜಾತಿ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದು ರಾಯರೆಡ್ಡಿ ಹೇಳಿದ್ದಾರೆ.