
ಗದಗ :ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರೇಣುಕಾಚಾರ್ಯರ ಜಯಂತಿ ಆಚರಿಸುವ ಕುರಿತು ಚರ್ಚಿಸುವ ನಿಮಿತ್ತ ಪೂರ್ವಭಾವಿ ಸಭೆಗೆ ತಯಾರಿ ನಡೆಸಲಾಗಿದೆ.

j3tvkannada
ಮಾಜೀ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ ‘ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಏ. 28ರಂದು ಸೊಪ್ಪಿನಕೇರಿಯ ಇಟಗಿ ಬಸವೇಶ್ವರ ದೇವಸ್ಥಾನದಿಂದ ರೇಣುಕಾಚಾರ್ಯ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಮೆರವಣಿಗೆಯು ಪಾದಗಟ್ಟಿ, ಹಾವಳಿ ಆಂಜನೇಯ ದೇವಸ್ಥಾನ, ವಿದ್ಯಾರಣ್ಯ ವೃತ್ತ, ಬಸ್ತಿಕೇರಿ, ಪಂಪವೃತ್ತ ಮುಖಾಂತರ ಸಂಚರಿಸಿ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಆಗಮಿಸಲಿದೆ. ನಂತರ ಧರ್ಮಸಭೆ ಜರುಗುವುದು’ ಎಂದು ಹೇಳಿದರು.
ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸುವರು. ಕರೇವಾಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಅನೇಕ ರಾಜಕೀಯ, ಮುಖಂಡರು, ಗಣ್ಯರು, ಜನಪ್ರತಿನಿಧಿಗಳು ಬಾಗವಹಿಸುವರು’ ಎಂದು ತಿಳಿಸಿದರು. ಸಭೆಯಲ್ಲಿ ಎ.ಎಂ. ಮೆಕ್ಕಿ, ಎಸ್.ಎಸ್. ಬಾಳೆಹಳ್ಳಿಮಠ, ಕುಬೇರಪ್ಪ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಬಸವೇಶ ಮಹಾಂತಶೆಟ್ಟರ, ಸಿ.ಆರ್. ಲಕ್ಕುಂಡಿಮಠ, ಚನ್ನಪ್ಪ ಕೋಲಕಾರ, ರುದ್ರುಸ್ವಾಮಿ ಘಂಟಾಮಠ, ಎಸ್.ವಿ. ಅಂಗಡಿ, ಬಸವರಾಜ ಬೆಂಡಿಗೇರಿ, ಗಂಗಾಧರ ಮೆಣಸಿನಕಾಯಿ, ಐ.ಸಿ. ಹತ್ತಿಕಾಳ, ಎನ್.ವಿ. ಹೇಮಗಿರಿಮಠ, ಎಂ.ಕೆ. ಕಳ್ಳಿಮಠ ಅವರು ಇದ್ದರು.