
ಮಂಗಳೂರು: 1956ರಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆ ಜಾರಿಗೆ ಬಂದರೂ 2005 ರಲ್ಲಷ್ಟೇ ತಂದೆಯ ಆಸ್ತಿಯಲ್ಲಿ ಹೆಣ್ಮಕ್ಕಳಿಗೆ ಸಮಪಾಲು ಕಾನೂನು ಜಾರಿಗೆ ಬಂತು. ಆದರೆ ಹೆಣ್ಮಕ್ಕಳು ತವರಿನ ಜತೆಗಿನ ಭಾವನಾತ್ಮಕ ಸಂಬಂಧದ ಹಿನ್ನೆಲೆಯಲ್ಲಿ ತಮ್ಮ ಹಕ್ಕಿಗಾಗಿ ಹೋರಾಡುವ ಪ್ರಸಂಗ ವಿರಳವಾಗಿದೆ. ಇಂದಿಗೂ ಕಾನೂನು ಮೀರಿ ಮಹಿಳಾ ಶೋಷಣೆ ನಡೆಯುತ್ತಿದೆ. ಕೃಷಿ ಭೂಮಿ ಹಕ್ಕನ್ನು ಪಡೆಯುವಲ್ಲಿ ಮಹಿಳೆಯರು ವಂಚಿತರಾಗುತ್ತಿದ್ದಾರೆ. ಮಹಿಳೆಯರಲ್ಲಿ ಕಾನೂನಿನ ಅರಿವು ಬರುವ ತನಕ ಡಾ.ಬಿ.ಆರ್.ಅಂಬೇಡ್ಕರ್ ಕಂಡ ಕನಸು ನನಸಾಗಲು ಸಾಧ್ಯವಿಲ್ಲ.

j3tvkannada
ದೇಶದ ಹೆಣ್ಮಕ್ಕಳಿಗೆ ಆಸ್ತಿಯಲ್ಲಿ ಸಮ ಪಾಲು ಹಕ್ಕು ಪ್ರತಿಪಾದಿಸಿದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕನಸು ಮಾತ್ರ 2005ರಲ್ಲಿ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ಕಾಯಿದೆ ಜಾರಿಗೆ ಬಂದರೂ ಇನ್ನೂ ನನಸಾಗಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 (ಎನ್ಎಫ್ಎಚ್ಎಸ್) ಪ್ರಕಾರ ದೇಶದ ಶೇ.42.3ರಷ್ಟು ಮಹಿಳೆಯರು ಮನೆಗಳ ಮಾಲೀಕರು/ಜಂಟಿ ಮಾಲೀಕತ್ವ ಹೊಂದಿದ್ದರೆ, ಪುರುಷರ ಪ್ರಮಾಣ ಶೇ.62.50ರಷ್ಟಿದೆ.
ಶೇ.31.7ಮಹಿಳೆಯರ ಹೆಸರಲ್ಲಿ ಅಥವಾ ಜಂಟಿ ಮಾಲೀಕತ್ವದ ಭೂಮಿಯಿದ್ದರೆ ಶೇ.68.30ರಷ್ಟು ಪುರುಷರು ಏಕಾಂಗಿಯಾಗಿ ಅಥವಾ ಅನ್ಯರ ಸಹಭಾಗಿತ್ವದಲ್ಲಿ ಭೂಮಿ ಹೊಂದಿದ್ದಾರೆ. 15 ರಿಂದ 49 ವಯಸ್ಸಿನ ಶೇ.13 ಮಹಿಳೆಯರಷ್ಟೇ ತಮ್ಮ ಹೆಸರಲ್ಲಿ ಮನೆ ಹೊಂದಿದ್ದರೆ ಶೇ.29ಮಂದಿ ಮಹಿಳೆಯರಿಗೆ ಅನ್ಯ ಮಹಿಳೆ ಅಥವಾ ಪುರುಷರ ಜಂಟಿ ಸಹಭಾಗಿತ್ವವಿದೆ.