
ಬೆಳಗಾವಿ : ಕರ್ನಾಟಕ ಸಾಹಿತ್ಯಕವಾಗಿ ದೀರ್ಘ ಇತಿಹಾಸ ಹೊಂದಿದ ಸಂಪದ್ಭರಿತ ನಾಡು. ಅದರಲ್ಲೂ ಕನ್ನಡ ಭಾಷೆ ಮಾತನಾಡಲು ಬಲು ಸೊಗಸಾಗಿದೆ. ಯುವಜನರು ನಾಡಿನ ಸಂಸ್ಕೃತಿ ತಿಳಿದುಕೊಳ್ಳಲು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು. ಇಲ್ಲಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನುಡಿಸಿರಿ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಜಿಲ್ಲೆಯ ಸಾಹಿತ್ಯಕ ಇತಿಹಾಸವನ್ನು ತಿಳಿಸುವ ಉದ್ದೇಶದಿಂದ ಪರಿಷತ್ ಜಿಲ್ಲಾ ಘಟಕವು ‘ನುಡಿಸಿರಿ’ ಎಂಬ ಆಕರ ಗ್ರಂಥ ಸಂಪಾದಿಸಿದ್ದು ಹೆಮ್ಮೆಯ ವಿಷಯ.

j3tvkannada
ಕನ್ನಡಿಗರ ಪ್ರೋತ್ಸಾಹದಿಂದ ಪ್ರತಿವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು. ಕೃತಿ ಪರಿಚಯಿಸಿದ ಫಕೀರನಾಯಕ ಗಡ್ಡೆಗೌಡರ, 50 ಸಮ್ಮೇಳನಗಳ ಸರ್ವಾಧ್ಯಕ್ಷರ ಚಿಂತನೆ ಒಳಗೊಂಡ ಈ ಪುಸ್ತಕ ಸಂಶೋಧನಾ ಗ್ರಂಥವಾಗಿ ರೂಪಗೊಂಡಿದೆ. ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವ ಗುರಿ ನಮ್ಮದಾಗಬೇಕು ಎಂದರು. ಕೃತಿ ಪರಿಚಯಿಸಿದ ಫಕೀರನಾಯಕ ಗಡ್ಡಿಗೌಡರ, 50 ಸಮ್ಮೇಳನಗಳ ಸರ್ವಾಧ್ಯಕ್ಷರ ಚಿಂತನೆ ಒಳಗೊಂಡ ಈ ಪುಸ್ತಕ ಸಂಶೋಧನಾ ಗ್ರಂಥವಾಗಿ ರೂಪಗೊಂಡಿದೆ. ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವ ಗುರಿ ನಮ್ಮದಾಗಬೇಕು ಎಂದರು.ಸಾಹಿತಿ ಯ.ರು.ಪಾಟೀಲ, ಸಮ್ಮೇಳನಗಳ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ. ಅವರು ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು. ಎಂ.ವೈ.ಮೆಣಸಿನಕಾಯಿ ಸ್ವಾಗತಿಸಿದರು. ವೀರಭದ್ರ ಅಂಗಡಿ ವಂದಿಸಿದರು. ಹೇಮಾ ಸೋನೊಳ್ಳಿ ನಿರೂಪಿಸಿದರು.