
ಮಂಡ್ಯ(ಕೆ.ಆರ್.ಪೇಟೆ): ಪಟ್ಟಣದಿಂದ ಮೋದೂರು-ಬೂಕನಕೆರೆ ಮಾರ್ಗವಾಗಿ ಐಚನಹಳ್ಳಿಗೆ ಹೋಗಬೇಕಾಗಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಐಚನಹಳ್ಳಿಗೆ ಹೋಗದೆ ಮಾರ್ಗ ಮಧ್ಯೆ ಬೂಕನಕೆರೆಯಲ್ಲೇ ವಿದ್ಯಾರ್ಥಿನಿಯರು ಮತ್ತು ವಯೋವೃದ್ಧರನ್ನು ಇಳಿಯುವಂತೆ ನಿಂದಿಸಿದ ಬಸ್ ಕಂಡಕ್ಟರ್ ಮತ್ತು ಡೈವರ್ ವಿರುದ್ದ ಐಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

j3tvkannada
ಬಸ್ನಲ್ಲಿ ಎಂಟು ಮಂದಿ ಪ್ರಯಾಣಿಕರಿದ್ದರೂ ಕೂಡ ಐಚನಹಳ್ಳಿ ಗ್ರಾಮಕ್ಕೆ ಹೋಗಲು ನಿರಾಕರಿಸಿದ ಕಂಡಕ್ಟರ್ ಪ್ರಭಾಕರ್ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಮಕ್ಕಳನ್ನು ಇಳಿಸದೆ ಚಾಲಕ ಮತ್ತು ನಿರ್ವಾಹಕ ವಾಪಸ್ ಕೆ.ಆರ್.ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ಘಟನೆ ಬಗ್ಗೆ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ದೌಡಾಯಿಸಿದ ಐಚನಹಳ್ಳಿ ಗ್ರಾಮಸ್ಥರು ಬೊಮ್ಮೇಗೌಡನಕೊಪ್ಪಲು ಗ್ರಾಮದ ಬಳಿ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದರು. ಐಚನಹಳ್ಳಿ ಗ್ರಾಮಸ್ಥರು ಮತ್ತು ಸ್ಥಳೀಯರನ್ನು ಕಂಡು ಡೈವರ್ ಮನು ಹಾಗೂ ಕಂಡಕ್ಟರ್ ಪ್ರಭಾಕರ್ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದರು.
ಐಕನಹಳ್ಳಿ ಗ್ರಾಮದ ಮುಖಂಡರು ಮಾತನಾಡಿ, ಇದೇ ರೀತಿ ಹಲವು ಬಾರಿ ಮಾರ್ಗದ ಮಧ್ಯದಲ್ಲಿ ವಿದ್ಯಾರ್ಥಿಗಳನ್ನು ಇಳಿಸಿ ಹೋಗುತ್ತಿದ್ದಾರೆ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಡಿಪೋ ಇನ್ಸ್ ಪೆಕ್ಟರ್ ರವಿ ಅವರು ಬಸ್ಸನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಗ್ರಾಮಸ್ಥರು ರವಿ ಅವರನ್ನು ತರಾಟೆಗೆ ತೆಗೆದುಕೊಂಡು ಸ್ಥಳಕ್ಕೆ ಬಸ್ ಡೈವರ್ ಮತ್ತು ಕಂಡಕ್ಟರ್ ನನ್ನು ಕರೆಸಬೇಕು. ಇಲ್ಲದಿದ್ದರೆ ಅಮಾನತು ಆದೇಶ ಮಾಡಬೇಕು. ಅಲ್ಲಿಯವರೆಗೆ ಬಸ್ಸನ್ನು ತೆಗೆದುಕೊಂಡು ಹೋಗಲು ಬಿಡಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಾದ ನಿಸರ್ಗ, ಭೂಮಿಕಾ, ರಜಿನಿ, ಮುಖಂಡರಾದ ರಾಮಕೃಷ್ಣೇಗೌಡ, ಮನು, ಕೃಷ್ಣ, ಶ್ರೀನಿವಾಸ್, ಪುಷ್ಪ, ಗಿರೀಶ್, ಕಮಲಮ್ಮ, ಭರತ್, ಚೇತನ್, ಪ್ರಜ್ವಲ್, ಶಿವಮಲ್ಲ, ನವೀನ್, ದರ್ಶನ್, ಅಭಿ, ಕಾಂತರಾಜು, ಐಚನಹಳ್ಳಿ ಹಾಗೂ ಬೊಮ್ಮೇಗೌಡನಕೊಪ್ಪಲು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.