
ಕೋಲಾರ:ಕಳೆದ 3 ತಿಂಗಳಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ರೋಗಿಗಳ ಸಂಖ್ಯೆ ಎಷ್ಟು, ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿರುವ ರೋಗಿಗಳ ಸಂಖ್ಯೆ ಎಷ್ಟು ಎಂಬ ವಿವರಗಳನ್ನು ನೀಡಬೇಕು ಅದರಲ್ಲಿ ತಪ್ಪು ಮಾಡಿರುವುದು ಕಂಡು ಬಂದರೆ ಖಂಡಿತವಾಗಿಯು ವೈದ್ಯರ ವಿರುದ್ಧ ಶಿಸ್ತು ಕ್ರಮ ವಹಿಸಲಾಗುವುದು ಅದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.

j3tvkannada
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರ್ಮಪಕವಾಗಿ ಚಿಕಿತ್ಸೆ ನೀಡುತ್ತಿಲ್ಲ 160 ಬೆಡ್ಗಳು ಇರುವ ದೊಡ್ಡ ಆಸ್ಪತ್ರೆಯಲ್ಲಿ 30 ರಿಂದ 40 ರೋಗಿಗಳು ಮಾತ್ರ ಒಳ ರೋಗಿಗಳಾಗಿ ದಾಖಲಾಗಿದ್ದಾರೆ ಎಂದು ದೂರುಗಳನ್ನು ಸಾರ್ವಜನಿಕರು ಶಾಸಕಿ ರೂಪಕಲಾ ಶಶಿಧರ್ ಗೆ ನೀಡಿದ ಹಿನ್ನಲೆಯಲ್ಲಿ ದಿಢೀರ್ ಎಂದು ಶಾಸಕಿ ರೂಪಕಲಾ ಶಶಿಧರ್ ಭೇಟಿ ನೀಡಿ ಪ್ರತಿಯೊಂದು ವಾರ್ಡ್ನಲ್ಲಿರುವ ಒಳ ರೋಗಿಗಳ ಆರೋಗ್ಯ ವಿಚಾರಿಸಿ ಇಲ್ಲಿನ ವೈದ್ಯರಿಂದ ಉತ್ತಮ ಆರೈಕೆ ದೊರಕುತ್ತಿದೆಯೇ ಎಂದು ಕೇಳಿ ಮಾಹಿತಿ ಪಡೆದುಕೊಂಡರು ಮತ್ತು ವೈದ್ಯರು ನರ್ಸಗಳಿಗೆ ರೋಗಿಗಳು ಚಿಕಿತ್ಸೆಗಾಗಿ ಬಂದ ವೇಳೆ ಸೌಜನ್ಯದಿಂದ ಮಾತನಾಡಿಸಿದರೆ ರೋಗಿಗಳಿಗೆ ಅರ್ದ ರೋಗ ಗುಣವಾಗಲಿದೆ ವೈದ್ಯರು ಅಂದರೆ ವೈದ್ಯನಾರಾಯಣೋ ಹರಿ ಎಂದು ಹೇಳುತ್ತಾರೆ ಆದರೆ ಇಲ್ಲಿ ನಿಮ್ಮ ವಿರುದ್ಧ ಸಾರ್ವಜನಿಕರು ದೂರು ನೀಡುವ ಮಟ್ಟಕ್ಕೆ ಬಂದಿದ್ದಾರೆ ಎಂದರೆ ನಿಮ್ಮ ಕರ್ತವ್ಯ ಹೇಗೆ ಇದೆ ಎಂದು ಕಂಡು ಬರುತ್ತದೆ. ಸರ್ಕಾರದ ಮಟ್ಟದಲ್ಲಿ ಕೈಕಾಲು ಹಿಡಿದು ಅನುದಾನವನ್ನು ತಂದು ಹೊಸ ಕಟ್ಟಡಗಳನ್ನು ಕಟ್ಟಿಸಿದ್ದಾರೆ. ನೀವು ಸರ್ಮಪಕವಾಗಿ ಸದ್ಬಳಕೆ ಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡದಿದ್ದರೆ ಹೇಗೆ? ಎಂದು ಪ್ರಶ್ನೆ ಮಾಡಿದರು.
ಎಂ.ಆರ್.ಐ ಯಂತ್ರವನ್ನು 3 ತಿಂಗಳಲ್ಲಿ ನನ್ನ ಕ್ಷೇತ್ರ ಅಭಿವೃದ್ದಿ ನಿಧಿ ಯೋಜನೆ ಅಥವ ಇತರೆ ಯೋಜನೆಯಡಿಯಲ್ಲಿ ತರುತ್ತೇನೆ ನೀವು ಪ್ರಮಾಣಿಕವಾಗಿ ರೋಗಿಗಳ ಸೇವೆಯನ್ನು ಮಾಡಬೇಕು ಎಂದು ಹೇಳಿದರು. ಆಸ್ಪತ್ರೆ ಮೇಲ್ದರ್ಜೆಗೆ ಹೆಚ್ಚಿಸುವಂತೆ ಹಾಗೂ ಇಂಟರ್ಗ್ರೇಟ್ ಟೌನ್ ಶಿಫ್ ನಿಗದಿತ ಅವದಿಯೊಳಗೆ ಮಾಡಿ ಕೊಡಬೇಕು ಮತ್ತು ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಕ್ಯಾಬಿನೆಟ್ ಸಭೆಯ ಮುಂದೆ ಪ್ರಸ್ಥಾವನೆ ಸಲ್ಲಿಸಿದ್ದೇನೆ ಎಂದರು.
ಹೃದಯ ಖಾಯಿಲೆ ಸಂಬಂಧವಾಗಿ ಹಲವು ರೋಗಿಗಳು ಮೃತಪಡುತ್ತಿರುವುದರಿಂದ ಪ್ರಥಮ ಹಂತದಲ್ಲಿ ರೋಗಿಗಳಿಗೆ ನೀಡಲಾಗುವ ಔಷದಿಗಳನ್ನು ಸರ್ಮಪಕವಾಗಿ ಸರಬರಾಜು ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು. ಈ ವೇಳೆ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ದಯಾಶಂಕರ್,ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ನಗರಸಭೆ ಸದಸ್ಯರಾದ ಕರುಣಾಕರನ್, ವೇಣು,ಪ್ರವೀಣ್ ಹಾಗೂ ಇತರರು ಹಾಜರಿದ್ದರು.