ಕಲಬುರಗಿ(ಜೇವರ್ಗಿ): ನಗರದ ಸಮೀಪದಲ್ಲಿರುವ ರದ್ದೇವಾಡ್ಗಿ, ಕೃಷಿ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ಪಶು ಪೋಷಣೆ ಹಾಗೂ ಶರೀರಕ್ರಿಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಕೆ.ವಿ.ಕೆ. ರದ್ದೇವಾಡ್ಗಿಯಲ್ಲಿ ಆಯೋಜಿಸಲಾಯಿತು.

j3tvkannada.in
ಪ್ರಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಡಾ. ಜ್ಯೋತಿರ್ಮಯ ಘೋಷ್ ಪ್ರಧಾನ ವಿಜ್ಞಾನಿ, ಬೆಂಗಳೂರು, ಇವರು ಜಿಲ್ಲೆಯಲ್ಲಿ ಲಭ್ಯವಿರುವ ಸ್ಥಳೀಯ ಪ್ರಾಣಿಗಳ ಸಂತಾನೋತ್ಪತ್ತಿ ಮತ್ತು ಉತ್ಪಾದನೆಯನ್ನು ಸುಧಾರಿಸಲು ವೈಜ್ಞಾನಿಕ ನಿರ್ವಹಣಾ ಪದ್ಧತಿ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸುವುದು ಮತ್ತು ಸ್ವಚ್ಛತೆಯ ಕುರಿತು ಮಾತನಾಡಿದರು.
ತದನಂತರ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಡಾ. ಶೋಭಾ ಸಜ್ಜನ್, ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ), ಪಶು ಆಸ್ಪತ್ರೆ, ಜೇವರ್ಗಿ ಇವರು ಇತ್ತೀಚಿನ ದಿನಗಳಲ್ಲಿ ರಾಸುಗಳಿಗೆ ಕಾಲು ಮತ್ತು ಬಾಯಿ ರೋಗ ಕಾಣಿಸಿಕೊಂಡು ರಾಸುಗಳಲ್ಲಿ ಉಷ್ಣತೆ ಹೆಚ್ಚಾಗಿ ಮೇವು ತಿನ್ನುವುದು ನಿಲ್ಲಿಸುತ್ತವೆ ಮುಂದುವರೆದು ಹೆಣ್ಣು ರಾಸುಗಳಲ್ಲಿ ಗರ್ಭ ಧರಿಸುವ ಸಾಧ್ಯತೆಗಳು ಕಡಿಮೆಯಿರುತ್ತವೆ. ಇದರ ಹತೋಟಿಗಾಗಿ ಎಲ್ಲಾ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆಗಳನ್ನು ನೀಡಲಾಗಿದೆ. ಇನ್ನು ಯಾರಾದರೂ ಲಸಿಕೆ ಹಾಕುವುದು ಬಾಕಿಯಿದ್ದಲ್ಲಿ ಹತ್ತಿರದ ಪಶು ವೈದ್ಯಕೀಯ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಲು ರೈತರಿಗೆ ಮನವಿ ಮಾಡಿದರು.