ಶಹಾಪೂರದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿವೇಕಾನಂದ ಸೇವಾಶ್ರಮ ಮತ್ತು ಬನಶಂಕರಿ 2 ನೇ ಹಂತ ಬೆಂಗಳೂರು ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಹಾಪೂರ ತಾಲೂಕು ನೇತ್ರತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆಯ ಶಿಬಿರ ಎರಡು ದಿನಗಳು ನಡೆಯಲಿದೆ. ಸುಮಾರು 500 ರಿಂದ 600 ಜನರಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಲಾಗುತ್ತದೆ.

ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಶಹಾಪೂರ ಆಸ್ಪತ್ರೆಯಲ್ಲಿಯೇ ಅಂದೇ ನೆರವೇರಿಸಲಾಗುವುದು. ಶ್ರೀ ವಿವೇಕಾನಂದ ಸೇವಾಶ್ರಮದ ಬಡವರಿಗಾಗಿ ಸಲ್ಲಿಸುತ್ತಿರುವ ನೇತ್ರದಾನ ಸೇವೆಯು ಸಂಪೂರ್ಣವಾಗಿ ಉಚಿತವಾಗಿದ್ದು, ತಮಗೆ ಮೊದಲೇ ತಿಳಿಸಿರುವ ಸಮಯಕ್ಕೆ ಸರಿಯಾಗಿ ಬಂದು ನೇತ್ರ ಚಿಕಿತ್ಸೆ ಪಡೆಯಬೇಕೆಂದು ತಿಳಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಡಾ. ಪದ್ಮಾನಂದ ಗಾಯಕವಾಡ, ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿಗಳು ಯಾದಗಿರಿ, ಡಾ. ರಮೇಶ ಗುತ್ತೇದಾರ, THO ಶಹಾಪೂರಡಾ, ಜಗದೀಶ ಉಪ್ಪಿನ ನೇತ್ರ ತಜ್ಞರು, ಭಾಗವಹಿಸಿದ್ಶದರು. ಶಹಾಪೂರ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಶಹಾಪೂರ ಆಸ್ಪತ್ರೆಯಲ್ಲಿ ನೆರವೇರಿಸಲಾಗುವುದು ಎಂದು ತಾಲೂಕು ಆರೋಗ್ಯ ಆಡಳಿತ ಮತ್ತು ಶೀ ವಿವೇಕಾನಂದ ಸೇವಾಶ್ರಮ ಬೆಂಗಳೂರು ಇವರು ತಿಳಿಸಿದ್ದಾರೆ.