
ಬೆಂಗಳೂರು:ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸಂಜೀವಿನಿ ಏರಿಯಾದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರಿಯಾಗಿ ನೀರು ಬರುತ್ತಿಲ್ಲ. ಗಾಳಿಗೆ ವಾಟರ್ ಮೀಟರ್ ಮಾತ್ರ ಜೋರಾಗಿ ರನ್ ಆಗ್ತಿದ್ದು, ಬಾರದ ನೀರಿಗೆ ಪ್ರತಿ ತಿಂಗಳು ಒನ್ ಟು ಡಬಲ್ ಬಿಲ್ ಬರುತ್ತಿದೆ. ಹಾಗಾಗಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ವಿರುದ್ಧ ಏರಿಯಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

j3tvkannada
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸಂಜೀವಿನಿ ಏರಿಯಾದಲ್ಲಿ ಸಾವಿರಾರು ಮನೆಗಳಿವೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸರಿಯಾಗಿ ನೀರು ಬರುತ್ತಿಲ್ಲ. ಆದರೆ ಪ್ರತಿ ತಿಂಗಳು ದುಪ್ಪಟ್ಟು ವಾಟರ್ ಬಿಲ್ ಮಾತ್ರ ಬರುತ್ತಿದೆಯಂತೆ. ಈ ಹಿಂದೆ 700 ರಿಂದ 800 ರೂ ವಾಟರ್ ಬಿಲ್ ಬರುತ್ತಿದ್ದ ಮನೆಗಳಿಗೆ, ಇದೀಗ 3500, ನಾಲ್ಕು ಸಾವಿರ, ಕೆಲವೊಂದು ಮನೆಗೆ ಎಂಟು ಸಾವಿರ ರೂ ಬಿಲ್ ಬರುತ್ತಿದೆ. ಈ ಬಗ್ಗೆ ಜಲ ಮಂಡಳಿ ಅಧಿಕಾರಿಗಳಿಗೆ ದೂರು ನೀಡಿದರೂ, ಸರಿ ಮಾಡುತ್ತೇವೆಂದು ಸಮಸ್ಯೆ ಬಗೆಹರಿಸದೆ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಮನೆ ಮಾಲೀಕರಾದ ಉಮಾ ಎಂಬುವವರು ತಿಳಿಸಿದ್ದಾರೆ.
ಇನ್ನು ಈ ಏರಿಯಾದಲ್ಲಿ ಒಂದೋ, ಎರಡೋ ಮನೆಗೆ ಈ ರೀತಿಯ ಒನ್ ಟು ಡಬಲ್ ಬಿಲ್ ಬರುತ್ತಿಲ್ಲ. ನೂರಾರು ಮನೆಗಳಿಗೆ ದುಪ್ಪಟ್ಟು ಬಿಲ್ ಬರುತ್ತಿದೆಯಂತೆ. ನೀರು ಬಾರದೆ ಇದ್ದರೂ ಗಾಳಿಗೆ ವಾಟರ್ ಮೀಟರ್ ತಿರುಗುತ್ತಿದೆ. ನೀರು ಬರುವ ಮುನ್ನ ಮತ್ತು ನೀರು ನಿಂತ ಮೇಲೆ ವಾಟರ್ ಮೀಟರ್ನಲ್ಲಿರುವ ಫ್ಯಾನ್ ಜೋರಾಗಿ ರನ್ ಆಗುತ್ತಿದೆಯಂತೆ. ಹಾಗಾಗಿ ಜಾಸ್ತಿ ಬಿಲ್ ಬರುತ್ತಿದೆ.
ಮೀಟರ್ ರೀಡರ್ ಬಂದಾಗ ನಾವು ಇಷ್ಟೊಂದು ನೀರು ಬಳಕೆ ಮಾಡಿಲ್ಲ ಯಾಕೆ ಇಷ್ಟೊಂದು ಬಿಲ್ ಬರುತ್ತಿದೆ ಎಂದು ಕೇಳಿದರೆ, ನೀವು ನೀರು ಬಳಕೆ ಮಾಡಿರುವುದರಿಂದಲೇ ಇಷ್ಟೊಂದು ಮೀಟರ್ ರೀಡಿಂಗ್ ತೋರಿಸುತ್ತಿದೆ ಎನ್ನುತ್ತಿದ್ದಾರಂತೆ. ಸಣ್ಣಪುಟ್ಟ ಮನೆಗೂ ಸಾವಿರಾರು ರೂ ಬಿಲ್ ಬರುತ್ತಿದೆ. ಹಾಗಾಗಿ ನಿವಾಸಿಗಳೆಲ್ಲಾ ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕುಡಿಯಲು ನೀರು ಕೊಡದಿದ್ದರೆ, ಈ ಜಲ ಮಂಡಳಿ ಅಧಿಕಾರಿಗಳು ಕೇವಲ ಗಾಳಿ ಬಿಟ್ಟು ಸಾವಿರಾರು ರೂ ಬಿಲ್ ಹಾಕುತ್ತಿರುವುದಕ್ಕೆ ನಿವಾಸಿಗಳು ಕೆಂಡ ಕಾರುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.