
ಚಿಕ್ಕಮಗಳೂರು: ಕೊರಗಜ್ಜ ಕರಾವಳಿ ಜೊತೆಗೆ ಮಲೆನಾಡಿನ ನೆಚ್ಚಿನ ದೈವ ಕೂಡ ಹೌದು, ಕರಾವಳಿ ಭಾಗದಲ್ಲಿ ಅಜ್ಜನಿಗೆ ತನ್ನದೇ ಅದ ಭಕ್ತ ಸಮೂಹವೇ ಇದೆ. ಅದೇ ರೀತಿಯಾಗಿ ಕರಾವಳಿಯ ಗಡಿ ಭಾಗ ಹಂಚಿಕೊಂಡಿರುವ ಕಳಸದಲ್ಲೂ ಕೂಡ ಅಜ್ಜನ ಭಕ್ತರು ಜಾಸ್ತಿಯೇ ಇದ್ದಾರೆ. ಕೊರಗಜ್ಜನಿಗೆ ಅಗೇಲು ಸೇವೆ ಕೊಡುವುದು ರೂಢಿ, ಅಜ್ಜನಿಗೆ ಅಗೇಲು ಸೇವೆ ನೀಡಿದರೆ ಕಷ್ಟಗಳೆಲ್ಲ ಮಾಯ ಎಂಬುದು ಭಕ್ತರ ನಂಬಿಕೆ

j3tvkannada
ಕೊರಗಜ್ಜ ಕರಾವಳಿಯ ಆರಾಧ್ಯ ದೈವ ತನ್ನನ್ನು ನಂಬಿ ಬಂದ ಭಕ್ತರಿಗೆ ಗಂಧ ಪ್ರಸಾದ ನೀಡುವ ಮೂಲಕ ಭಕ್ತರ ಕಷ್ಟಗಳನ್ನು ಈಡೇರಿಸುವ ಅಜ್ಜ. ಇಂತಹ ಕೊರಗಜ್ಜನಿಗೆ ರಾಜ್ಯದ ತುಂಬಾ ಸಾವಿರಾರು ಜನರ ಭಕ್ತ ಗಣವೇ ಇದೆ.
ಹೌದು, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆ ಗ್ರಾಮದ ಶ್ರೀ ಕ್ಷೇತ್ರ ಕೊರಗಜ್ಜನ ಸಾನಿಧ್ಯದಲ್ಲಿ ಪ್ರತಿ ತಿಂಗಳು ಅಗೇಲು ಸೇವೆ ಶ್ರೀ ಸ್ವಾಮಿಗೆ ಕೊರಗಜ್ಜನಿಗೆ ಸಮರ್ಪಣೆ ಮಾಡುತ್ತಾರೆ. ಇನ್ನು ಕೊರಗಜ್ಜನಿಗೆ ಭಕ್ತಾದಿಗಳು ಪ್ರತಿ ಸಂಕ್ರಾಂತಿಯ ದಿವಸದಂದು ನೂರಾರು ಸಂಖ್ಯೆಯಲ್ಲಿ ಜನರು ಬಂದು ಅಗೆಲು ಸೇವೆಯನ್ನು ನೀಡುತ್ತಾರೆ