
ಬೀದರ್: ಪಟ್ಟಣದ ಹನುಮಾನ ಮಂದಿರದ ಮುಂಭಾಗದಲ್ಲಿರುವ ಆಲದ ಮರಕ್ಕೆ ವಟಸಾವಿತ್ರಿ ಪೂರ್ಣಿಮೆಯಂದು ಮುತೈದೆಯರು ಪತಿರಾಯನಿಗೆ ಭಗವಂತ ದೀರ್ಘಾಯುಷ್ಯ,ಸದೃಡ ಕಾಯ,ಆರೋಗ್ಯ ನೀಡಲಿ ಎಂದು ನವ ವಧುಗಳಿಂದ ವಯೋವೃದ್ಧದವರೆಗಿನ ಮಹಿಳೆಯರು ದಾರ ಸೂತ್ತಿ ಪ್ರಾರ್ಥನೆಗೈದರು. ಭಾರತ ಆರ್ಥಿಕವಾಗಿ ಬಡ ರಾಷ್ಟ್ರವಾಗಿದ್ದರೂ, ಅರ್ಥಬದ್ಧ ಸಂಪ್ರದಾಯ ಆಚರಣೆಯಲ್ಲಿ ಶ್ರೀಮಂತ ರಾಷ್ಟ್ರವಾಗಿದೆ. ಆಷಾಢ ಮಾಸದ ವಟ ಸಾವಿತ್ರಿ ಹುಣ್ಣಿಮೆಯಂದು ದೇಶದ ಕೆಲವು ರಾಜ್ಯಗಳಲ್ಲಿ ಆದಿಕಾಲದಿಂದಲೂ ನಡೆದು ಬಂದ ಸಂಪ್ರದಾಯ ಆಚರಣೆ ಮಾಡಲಾಗುತ್ತದೆ.

ಭಾರತ ಪುರಷ ಪ್ರಧಾನ ರಾಷ್ಟ್ರ ಎಂದು ಕರೆಯುವ ವಾಡಿಕೆಯಿದೆ. ಆದರೆ ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲಿ ಪುರುಷನಿಗೆ ಸಮನಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪುರಷ ಪ್ರಧಾನ ಶಬ್ದ ಗೌಣವಾಗಿದೆ. ಆದಾಗ್ಯು ನಗರ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಂದು ಸಂಪ್ರದಾಯಕ್ಕೆ ತನ್ನದೆಯಾದ ಮೌಲ್ಯವಿದೆ. ಇಂದಿಗೂ ಮುತೈದೆಯರು ಗಂಡನ ಆಯುಷ್ಯ ವೃದ್ಧಿಸಲಿ ಎಂದು ವಟ ಸಾವಿತ್ರಿ ಹುಣ್ಣಿಮೆಯಂದು ವಿವಿಧ ನಮೂನೆಯ ನೈವಿದ್ಯಯೊಂದಿಗೆ ಎಲ್ಲ ದೇವಸ್ಥಾನಗಳಲ್ಲಿ ಶ್ರದ್ಧೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ಇಂದು ಪ್ರತಿಯೊಬ್ಬ ಮಹಿಳೆ ಮುತೈದೆಯಾಗಿ ಸಾವು ಬಯಸುತ್ತಾಳೆ. ಅದರರ್ಥ ಪುರುಷ ಪ್ರಧಾನ ಸಮಾಜದಲ್ಲಿಯೂ ಪತ್ನಿ ಪತಿಗೆ ಎಲ್ಲಿಲ್ಲದ ಗೌರವ ನೀಡುತ್ತಾಳೆ. ಜೋಡಿ ಬೇಕು ನನಗೆ ಬಂಗಾರ, ಬೆಳ್ಳಿ, ಹೊಲ, ಮನೆ, ಆಸ್ತಿ ಪಾಸ್ತಿ ಏನು ಬೇಡ. ನನ್ನ ಗಂಡ ನನ್ನ ಜನ್ಮಕಿದ್ದರ ಸಾಕು. ಪತಿಗೆ ಸಮಾನವಾದ ವಸ್ತು ಜಗತ್ತಿನಾಗ ಯಾವುದು ಇಲ್ಲ. ಪತಿಯಿಂದಲೇ ಪತ್ನಿಗೆ ಗೌರವ, ಮಾನ, ಮರ್ಯಾದೆ ಸಿಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಆದರ್ಶ ಗೃಹಿಣಿಯೊಬ್ಬರು ಹೊರ ಹಾಕಿದ ಅಂತಕರಣದ ಮಾತುಗಳು. ಅದು ವಾಸ್ತವಿಕ ಅನಿಸುತ್ತದೆ. ಯಾಂತ್ರಿಕ, ತಾಂತ್ರಿಕ, ಕಂಪ್ಯೂಟರ ಯುಗದಲ್ಲಿ ಇನ್ನೂ ಅನೇಕ ಮಹಿಳೆಯರು ಕುಟುಂಬದ ಗೌರವ ಕಾಪಾಡುವವರಿದ್ದಾರೆ. ಅದರಿಂದ ಭಾರತ ಸಂಸ್ಕೃತಿಯಲ್ಲಿ ಶ್ರೀಮಂತ ರಾಷ್ಟ್ರ ಎಂಬುದು ವಿಶ್ವಕ್ಕೆ ತೋರಿಸಿ ಕೊಟ್ಟಿದೆ ಎನ್ನುತ್ತಾರೆ ಹಿರಿಯರು.