
ವಿಜಯಪುರ: ಯಾವುದೇ ಕಾರ್ಯದಲ್ಲಿ ಯಶಸ್ವಿ ಕಾಣಬೇಕಾದರೇ ಗುರು ಅನ್ನುವಂತಹ ಶಕ್ತಿಯನ್ನು ನಂಬಿ ನಡೆಯಬೇಕು ಆ ಶಕ್ತಿಯೇ ಅಪೇಕ್ಷಿಸಿದ ಗುರಿ ಮುಟ್ಟಲು ಸಾಧ್ಯವಾಗಿಸಿತ್ತದೆ, ಎಂದು ವೀರಶೈವ ಲಿಂಗಾಯತ ಪಂಚಮಶಾಲಿ ಬಬಲೇಶ್ವರ ಬ್ರಹನ್ಮಠ ಪೀಠದ ಜಗದ್ಗುರುಗಳಾದ ಪ.ಪೂ.ಶ್ರೀ ಶ್ರೀ ಶ್ರೀ ಜಗದ್ಗುರು ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

j3tvkannada
ಸ್ಥಳೀಯ ಹಂಚಾಟೆ ಕಾಂಪ್ಲೆಕ್ಸಿನಲ್ಲಿ ವಿಜಯಪುರದ ಕೆ ಡೈಮಂಡ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಕ್ರೆಡಿಟ್ ಸೊಸಾಯಿಟಿ ಲಿಮಿಟೆಡ್ ನ ತಾಳಿಕೋಟೆಯ ನೂತನ ಶಾಖೆಯನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಜಗದ್ಗುರುಗಳು, ಗುರು ಅನ್ನುವಂತಹ ಶಕ್ತಿಯನ್ನು ನಂಬಿದ ವಿಜಯಪುರದ ಕೆ ಡೈಮಂಡ್ ಸಂಸ್ಥೆಯ ಅಧ್ಯಕ್ಷರಾದ ಕಾಶಿನಾಥ.ಕೆ ಅವರು ಈ ಸಂಸ್ಥೆಯನ್ನು ಬೆಳೆಸುತ್ತಾ ಗ್ರಾಹಕರ, ಆಡಳಿತ ಮಂಡಳಿಯವರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು. ದೇವರ ಭಕ್ತಿ, ಗುರು ಭಕ್ತಿಯಲ್ಲಿ ಕಾಶೀನಾಥ ಅವರು ನಂಬಿಕೆಯಿಟ್ಟು ಮುನ್ನಡೆದಿದ್ದಾರೆ. ದೈವ ಹೆಚ್ಚೊ ಪ್ರಯತ್ನ ಹೆಚ್ಚೊ ಎಂಬ ಈ ಚರ್ಚೆಯನ್ನು ಲಕ್ಷಿಸಿಕೊಂಡು ಗುರು ಭಕ್ತಿ, ದೈವ ಭಕ್ತಿಯಲ್ಲಿ ಯಶಸ್ವಿ ಕಾಣುತ್ತಾ ಸಾಗಿದ್ದಾರೆಂದ ಅವರು, ಮಕ್ಕಳಾದವರು ಮಾತಾ ಪಿತರ ಪಾಲನೆ ಪೋಷಣೆಗೆ ಮುಂದಾಗಬೇಕು ಆಗ ಭಗವಂತ ಒಲಿಯುತ್ತಾನೆ ಅಲ್ಲದೇ ಜೀವನದಲ್ಲಿ ಸನ್ಮಾರ್ಗ ದೊರೆಯಲಿದೆ ಎಂದರು.
ಇನ್ನೋರ್ವ ಸಾನಿಧ್ಯ ವಹಿಸಿದ ಮನಗೂಳಿಯ ಸಂಸ್ಥಾನಾ ಹಿರೇಮಠದ ಶ್ರೀ ಪ.ಪೂ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ ಇಂದು ಉದ್ಘಾಟನೆಗೊಂಡ ಕೆ ಡೈಮಂಡ್ ಸೊಸಾಯಿಟಿ ನನಗೆ ದೀಕ್ಷೆ ನೀಡಿದಂತಹ ಜಗದ್ಗುರುಗಳಿಂದ ಉದ್ಘಾಟನೆಗೊಂಡಿದೆ ಈ ಕಾರ್ಯ ಯಶಸ್ವಿ ಕಾಣಲಿದೆ ಎಂದರು. ಭೂಮಿಯ ಮೇಲೆ ಯಾವುದು ಶಾಶ್ವತವಲ್ಲ ಕಾರಣ ಭೂಮಿಯ ಮೇಲೆ ಇರುವ ತನಕ ದಾನ-ಧರ್ಮ ಎನ್ನುವುದನ್ನು ಮಾಡಬೇಕು, ನಿರ್ಗತಿಕರಿಗೆ ಒಳ್ಳೆಯ ಮಾರ್ಗವನ್ನು ತೋರುವ ಕಾರ್ಯ ಮಾಡಬೇಕು ಅಂತಹ ಕಾರ್ಯ ಕೆ ಡೈಮಂಡ್ ಸೊಸಾಯಿಟಿ ಜಿಲ್ಲಾಧ್ಯಕ್ಷರಾದ ಕಾಶೀನಾಥ ಅವರು ನಡೆಸಿದ್ದಾರೆ ಎಂದರು. ವಯೋಮಿತಿ ಎನ್ನುವುದು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗುತ್ತದೆ ಆ ಅವದಿಯಲ್ಲಿ ಏನು ಮಾಡುತ್ತಾ ಸಾಗಬೇಕೆಂದು ಅರ್ಥೈಸಿಕೊಂಡು ನಡೆಯಬೇಕು. ಅಂತಹ ಕಾರ್ಯಕ್ಕೆ ಮುಂದಾಗಿರುವ ಅಧ್ಯಕ್ಷ ಕಾಶಿನಾಥ ಅವರು, ಕೆ ಡೈಮಂಡಿನ ನೂರಾರು ಶಾಖೆಗಳನ್ನು ಪ್ರಾರಂಭಿಸಿ ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗ ದೊರಕಿಸಿಕೊಡುವಂತಹ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದ ಶ್ರೀಗಳು ತಾಳಿಕೋಟೆಯಲ್ಲಿ ಇಂದು ಉದ್ಘಾಟನೆಗೊಂಡ ಕೆ ಡೈಮಂಡ್ 5ನೇ ಶಾಖೆಯಾಗಿ ಪರಿಣಮಿಸಿದೆ ಎಂದರು.
ಬಬಲೇಶ್ವರ ಜಗದ್ಗುರುಗಳಿಂದ ಹಾಗೂ ಮನಗೂಳಿ ಶ್ರೀಗಳಿಂದ ಬಬಲೇಶ್ವರದಲ್ಲಿ 2ನೇ ಶಾಖೆಯನ್ನು ಉದ್ಘಾಟಿಸಲಾಗಿತ್ತು, ಈಗ 5ನೇ ಶಾಖೆ ಉದ್ಘಾಟನೆಗೂ ಅದೇ ಶ್ರೀಗಳು ಇಂದು ಉಪಸ್ಥಿತರಿದ್ದಾರೆ. ಗುಂಡಕನಾಳ ಶ್ರೀಗಳು ಕೂಡಾ ಪಾಲ್ಗೊಂಡಿರುವದು ಸಂತಸ ತಂದಿದೆ ಎಂದು ಹೇಳಿದ ಅಧ್ಯಕ್ಷ ಕಾಶಿನಾಥ ಅವರು, ನನ್ನಲ್ಲಿದ್ದ ಕನಸನ್ನು ನನಸ್ಸು ಮಾಡುವಂತಹ ಭಾವನೆಯೊಂದು ಅಡಗಿದೆ, ಆ ಕನಸ್ಸಿನ ಯಶಸ್ವಿಗೆ ರಕ್ತವನ್ನು ನೀರು ಮಾಡಬೇಕಾಗುತ್ತದೆ, ಆದರೆ ಏಷ್ಟೋ ಸಂಸ್ಥೆಗಳು ಬಂದು ಹೋಗಿದ್ದರೂ ಉದ್ದೇಶಗಳು ಬೇರೆ ಬೇರೆ ಇರುತ್ತವೆ. ಒಳ್ಳೆಯ ಉದ್ದೇಶವಿದ್ದರೆ ಅದು ಅಜರಾಮರವಾಗಿ ಉಳಿಯಲು ಸಾದ್ಯವೆಂದು ನಾನು ನಂಬಿದ್ದೇನೆ ಎಂದು ಹೇಳಿದ ಅವರು, ಸ್ವಾತಂತ್ರದ ನಂತರ 30 ಸಾವಿರ ಪಕ್ಷಗಳು ರಿಜಿಸ್ಟ್ರೇಷನ್ ಆಗಿವೆ ಅವುಗಳಲ್ಲಿ 5 ರಿಂದ 10 ಮಾತ್ರ ದೇಶದಲ್ಲಿ ಸೇವಾ ಕಾರ್ಯದಲ್ಲಿ ಉಳಿದಿವೆ ಎಂದರು. ನಮ್ಮ ಸಂಸ್ಥೆಯು ಪಕ್ಷಾತೀತ ಸಂಸ್ಥೆಯಾಗಿದ್ದು ಇಲ್ಲಿ ಜಾತಿ ಬೇದವಿಲ್ಲಾ, ಇಲ್ಲಿ ಎಲ್ಲಾ ನಮ್ಮವರೇ ಎಂದು ಭಾವಿಸಿ ನಡೆಯುವಂತಹ ಸಂಸ್ಥೆ ಇದಾಗಿದೆ ಎಂದು, ಅಲ್ಲಿ ಸಿಗತಕ್ಕಂತಹ ಸಾಲ ಸೌಲಭ್ಯಗಳ ಕುರಿತು ವಿವರಿಸಿದರು.
ಸಂಸ್ಥೆಯ ಗೌರವ ಅಧ್ಯಕ್ಷ ನ್ಯಾಯವಾದಿ ಲಚ್ಚಪ್ಪ ಎಂ.ಭೂಸನೂರ ಉದ್ಘಾಟನೆ ಮಾಡಿ ಮಾತನಾಡಿದರು. ಪುರಸಭಾ ಸದಸ್ಯ ವಾಸುದೇವ ಹೆಬಸೂರ, ಜಿಲ್ಲಾ ಉಪಾಧ್ಯಕ್ಷರಾದ ಶಶಿಧರ ರೂಡಗಿ ಅವರು ಮಾತನಾಡಿದರು. ಇದೇ ಸಮಯದಲ್ಲಿ ಶ್ರೀಗಳಿಗೆ ಅಥಿತಿ ಹಾಗೂ ಗಣ್ಯ ಮಾನ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ, ಶರಣ ಬಸವೇಶ್ವರ ಸಂಘದ ಅಧ್ಯಕ್ಷ ಮಹಾದೇವಪ್ಪ ಕುಂಭಾರ, ಲಕ್ಷ್ಮೀಕ್ಲಾಥ್ ಸ್ಟೋರ್ ಮಾಲಿಕ ರಾಜು ಹಂಚಾಟೆ, ರೋಟರಿಯನ್ ಅಶೋಕ ಬಳಗಾನೂರ, ಸುರೇಶಗೌಡ ಪಾಟೀಲ, ಸಿ.ಇ.ಓ ದೀಲಿಪ ಜಾಧವ, ಮುದ್ದೇಬಿಹಾಳ ಶಾಖಾ ಅಧ್ಯಕ್ಷ ಬಾಬು ಬಿರಾದಾರ, ಶಿವಕುಮಾರ ಬಿರಾದಾರ, ನಿರ್ದೇಶಕರಾದ ಜಿ.ಜಿ.ಮದರಕಲ್ಲ, ಶಾಮ ಹಂಚಾಟೆ, ಸುರೇಶ ಬಬಲೇಶ್ವರ, ಎಸ್.ಜಿ.ಯಳಮೇಲಿ, ಎಸ್.ಟಿ.ನಿಡಗುಂದಿ, ಪಿ.ಎಂ.ಸಜ್ಜನ, ಎಂ.ಆಯ್.ಬಬಲೇಶ್ವರ, ಎಸ್.ಬಿ.ಪಾಟೀಲ, ಎಸ್.ಎ.ಮದರಕಲ್ಲ, ಶ್ರೀಮತಿ ಮಹಾದೇವಿ ಪಾಲ್ಕಿ, ಗುರುಬಸವ ಕೆಂಪವಾಡ, ನೂತನ ಶಾಖಾ ಅಧ್ಯಕ್ಷ ಸುರೇಶಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ನೇತ್ರಾ ಕಡಿ ಪ್ರಾರ್ಥಿಸಿದರು. ಸಂಗಮೇಶ ಪಾಲ್ಕಿ ನಿರೂಪಿಸಿದರು. ಎಸ್.ಬಿ.ಪಾಟೀಲ ಸ್ವಾಗತಿಸಿ ವಂದಿಸಿದರು.